ಕಾಂಗ್ರೆಸ್ ನವ ಸಂಕಲ್ಪ ಯಾತ್ರೆಯಲ್ಲಿ RSS ಗಾನಾಂಜಲಿ!

Prasthutha|

ಕೇರಳ: ಎಐಸಿಸಿ ಆಯೋಜಿಸಿದ ನವಸಂಕಲ್ಪ ಯಾತ್ರೆಯ ನಿಯಾಟುಂಕರ ಬ್ಲಾಕ್ ಕಾಂಗ್ರೆಸ್ ಘಟಕದ ಪಾದಯಾತ್ರೆಯುದ್ದಕ್ಕೂ ಅರ್ ಎಸ್ ಎಸ್ ಗಾನಾಂಜಲಿ ಮೊಳಗಿದ್ದು ಇದೀಗ ವಿವಾದವಾಗಿದೆ.

- Advertisement -

ಯುಡಿಎಫ್ ಕನ್ವೀನರ್ ಎಂ.ಎಂ ಹಸನ್ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಪಾಲೋಡ್ ರವಿ, ಕೆಪಿಸಿಸಿ‌ ಸದಸ್ಯ ಶ್ರೀಕುಮಾರ್ ಸಹಿತ ಹಲವು ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.

ಕಾಂಗ್ರೆಸ್ ಪಾದಯಾತ್ರೆ ಉದ್ದಕ್ಕೂ ಆರ್ ಎಸ್ ಎಸ್ ನ ಶಾಖೆಯಲ್ಲಿ ಹಾಡುವಂತಹ ಗಾಣಾಂಜಲಿಯ ಪ್ರಧಾನ ಗೀತೆ ಮೊಳಗುತ್ತಿತ್ತು.

- Advertisement -

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಾಡು ಹೇಗೆ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಮೊಳಗಿತು ಎಂಬ ವಿಮರ್ಶೆಗಳು ಸಾಮಾಜಿಕ ವಲಯಗಳಲ್ಲಿ ತೀವ್ರವಾದವು. ಆ ಬೆನ್ನಲ್ಲೇ ಕಾರ್ಯಕ್ರಮದ ವೀಡೀಯೋವನ್ನು ಪಕ್ಷದ ಅಧಿಕೃತ ಖಾತೆಯಿಂದ ತೆಗೆದು ಹಾಕಲಾಯಿತು ಎಂದು ತಿಳಿದು ಬಂದಿದೆ.

Join Whatsapp