ಕೇಸರಿ ಶಾಲು ರಾಜ್ಯಾದ್ಯಂತ ವಿಸ್ತರಿಸಿದರೆ ದೊಡ್ಡ ಸಮಸ್ಯೆ: ಸತೀಶ ಜಾರಕಿಹೊಳಿ ಕಳವಳ

Prasthutha|

ಬೆಳಗಾವಿ:  ಉಡುಪಿಯ ಕಾಲೇಜುಗಳಲ್ಲಿ ಕೇಸರಿ ಶಾಲು ವಿವಾದ ರಾಜ್ಯಾದ್ಯಂತ ವಿಸ್ತರಿಸಿದರೆ ಬಹಳಷ್ಟು ದೊಡ್ಡ ಸಮಸ್ಯೆಗಳಾಗುತ್ತವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಳವಳ ವ್ಯಕ್ತಪಡಿಸಿದರು.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಲೆ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಮವಸ್ತ್ರದ ವಿಚಾರದಲ್ಲಿ ಅಹಿತಕರ ಬೆಳವಣಿಗೆಗಳು ನಡೆಯಬಾರದು. ಅವರವರ ಜಾತಿ, ಧರ್ಮ ಜೊತೆಯಲ್ಲೇ ಇರುತ್ತದೆ. ಅದನ್ನೇನೂ ಮಾಡಲಾಗದು. ಆದರೆ, ಶಿಕ್ಷಣ ಸಂಸ್ಥೆಗಳಲ್ಲಿ ಗೊಂದಲಗಳಾಗದಂತೆ ಸರ್ಕಾರ ಇನ್ನಾದರೂ ತಡೆಯಬೇಕು’ ಎಂದು ಕೋರಿದರು.

‘ಧರ್ಮಗಳನ್ನು ಪೂರ್ಣ ತಿಳಿದುಕೊಳ್ಳಬೇಕು. ಕೇಸರಿ ಶಾಲು ಹಾಕಿರೆಂದು ಧರ್ಮದಲ್ಲಿ ಹೇಳಿಲ್ಲ.  ಧರ್ಮಗಳು ಒಳ್ಳೆಯದನ್ನೇ ಹೇಳಿವೆ. ಆದರೆ, ಕೆಲವು ಸಂಘಟನೆಗಳಿಂದ ದಾರಿ ತಪ್ಪಿಸುವ ಪ್ರಯತ್ನ ಆಗುತ್ತದೆ. ಕಲಿಯುವ ಮತ್ತು ಜ್ಞಾನ ಪಡೆಯುವ ವಯಸ್ಸಿನಲ್ಲಿ ಧರ್ಮ, ಜಾತಿ ಬಂದರೆ ಸಮಸ್ಯೆಯಾಗುತ್ತದೆ’ ಎಂದರು.



Join Whatsapp