ವಿಜಿಲೆನ್ಸ್ ದಾಳಿ| 20 ಲಕ್ಷ ರೂ. ಇದ್ದ ಚೀಲವನ್ನು ಪಕ್ಕದ ಕಟ್ಟಡಕ್ಕೆ ಎಸೆದ ಎಂಜಿನಿಯರ್!

Prasthutha|

ಭುವನೇಶ್ವರ: ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದಾಗ ಸರ್ಕಾರಿ ಸೇವೆಯಲ್ಲಿರುವ ಹಿರಿಯ ಎಂಜಿನಿಯರೊಬ್ಬರು ತನ್ನಲ್ಲಿದ್ದ ಹಣವನ್ನು ಬ್ಯಾಗ್ ನಲ್ಲಿ ತುಂಬಿಸಿ ಪಕ್ಕದ ಕಟ್ಟಡಕ್ಕೆ ಎಸೆದ ಘಟನೆ ನಡೆದಿದೆ.

- Advertisement -

ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದಾಗ ಒಡಿಶಾ ಪೊಲೀಸ್ ಹೌಸಿಂಗ್ ಆ್ಯಂಡ್ ವೆಲ್ಫೇರ್ ಕಾರ್ಪೋರೇಷನ್ ನ ಡೆಪ್ಯುಟಿ ಮ್ಯಾನೇಜರ್ ಪ್ರತಾಪ್ ಕುಮಾರ್ ಸಮಲ್ ಅವರು 20 ಲಕ್ಷ ರೂ. ತುಂಬಿದ್ದ ಬ್ಯಾಗನ್ನು ಸಮೀಪದ ಕಟ್ಟಡಕ್ಕೆ ಎಸೆದಿದ್ದಾರೆ.

ವಿಜಿಲೆನ್ಸ್ ದಾಳಿಗೆ ಗಾಬರಿಗೊಂಡ ಪ್ರತಾಪ್ ಕುಮಾರ್ ಸಮಾಲ್ ಅವರು ಹಣವನ್ನು ಅಡಗಿಸಿಡಲು ಪ್ರಯತ್ನಿಸಿದ್ದು, ಹಣ ತುಂಬಿಸಿದ ಚೀಲವನ್ನು ಪಕ್ಕದ ಕಟ್ಟಡದ ಟೆರೇಸ್ ಮೇಲೆ ಎಸೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಪಕ್ಕದ ಮನೆಯ ಟೆರೇಸ್ ನಿಂದ 20 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು, ಮತ್ತೆ 18 ಲಕ್ಷ ರೂಪಾಯಿ ಸಮಾಲ್ ಅವರ ಮನೆಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

Join Whatsapp