ಮುತಾಲಿಕ್ ಉಡುಪಿ ಪ್ರವೇಶಿಸದಂತೆ ಜಿಲ್ಲಾಧಿಕಾರಿಯಿಂದ ಆದೇಶ

Prasthutha|

ಉಡುಪಿ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶುಕ್ರವಾರದ ಉಡುಪಿ ಜಿಲ್ಲೆಗೆ ಪ್ರವೇಶಿಸದಂತೆ ಜಿಲ್ಲಾಧಿಕಾರಿ ಕರುಣಾ ರಾವ್ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ.

- Advertisement -

ಸಿಪಿಸಿ ಸೆಕ್ಷನ್ 133,143 ಮತ್ತು 144 ರ ಅನ್ವಯ ಈ ತಡೆಯನ್ನು ಹೇರಲಾಗಿದ್ದು ಅವರ ಆಗಮನವು ಸಮಾಜದ ಸ್ವಾಸ್ಥವನ್ನು ಕೆಡಿಸುತ್ತದೆ ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.

ಹಿಂದೂ ಜಾಗರಣಾ ವೇದಿಕೆಯ ಆಶ್ರಯದಲ್ಲಿ ಗಂಗೊಳ್ಳಿಯ ವೀರೇಶ್ವರ ದೇವಾಲಯದಲ್ಲಿ ನಡೆಯಲಿರುವ ಸಾಮೂಹಿಕ ಸತ್ಯನಾರಾಯಣಾ ಪೂಜೆಯ ಮುಖ್ಯ ಭಾಷಣಗಾರರಾಗಿ ಆಗಮಿಸಬೇಕಾಗಿದ್ದ ಮುತಾಲಿಕ್ ಅವರನ್ನು ಕಾರ್ಯಕ್ರಮಕ್ಕೆ ಆಗಮಿಸದಂತೆ ತಡೆ ವಿಧಿಸಲಾಗಿದೆ. ಮುತಾಲಿಕ್ ರಂತಹ ಉದ್ರೇಕಕಾರಿ  ಭಾಷಣಗಾರರು ಗಂಗೊಳ್ಳಿಯಂತಹ ಕೋಮು ಸೂಕ್ಷ್ಮ ಪ್ರದೇಶಕ್ಕೆ ಆಗಮಿಸಿದರೆ ಅದು ಇತರೆ ಧರ್ಮದ ಭಾವನೆಗೆ ಧಕ್ಕೆ ತರಬಹುದು ಎಂಬ ಕಾರಣದ ಮೇರೆಗೆ ಈ ತಡೆಯನ್ನು ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕುರುಣಾ ರಾವ್ ವರದಿಯಲ್ಲಿ ತಿಳಿಸಿದ್ದಾರೆ.

Join Whatsapp