ಸುರೇಶ್ ಚವ್ಹಾಂಕೆ ಮುಸ್ಲಿಮ್ ವಿರೋಧಿ ಭಾಷಣ ಮಾಡಿಲ್ಲ: ಸುಪ್ರೀಮ್ ಕೋರ್ಟ್’ಗೆ ದೆಹಲಿ ಪೊಲೀಸ್

Prasthutha|

ನವದೆಹಲಿ: 2021 ರಲ್ಲಿ ಹಿಂದೂ ಯುವ ವಾಹಿನಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಸುದರ್ಶನ್ ನ್ಯೂಸ್ ಟಿವಿ ಮುಖ್ಯ ಸಂಪಾದಕ ಸುರೇಶ್ ಚವ್ಹಾಂಕೆ ಅವರು ಯಾವುದೇ ಮುಸ್ಲಿಂ ವಿರೋಧಿ ದ್ವೇಷ ಭಾಷಣ ಮಾಡಿಲ್ಲ ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

- Advertisement -

ಕಾರ್ಯಕ್ರಮದಲ್ಲಿ ಚವ್ಹಾಂಕೆ ಅವರ ಭಾಷಣದ ವಿರುದ್ಧ ಹಲವಾರು ವ್ಯಕ್ತಿಗಳು ಸಲ್ಲಿಸಿದ್ದ ದೂರುಗಳ ಆಧಾರದಲ್ಲಿ ಅವರ ಭಾಷಣದ ವೀಡಿಯೋ ತುಣುಕುಗಳ ಬಗ್ಗೆ ಆಳವಾದ ತನಿಖೆ ನಡೆಸಲಾಗಿದ್ದು, ಅದರಲ್ಲಿ ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಲಾಗಿಲ್ಲ ಎಂದು ದೆಹಲಿ ಪೊಲೀಸರು ಸುಪ್ರೀಮ್ ಕೋರ್ಟ್’ಗೆ ತಿಳಿಸಿದ್ದಾರೆ.

“ವೀಡಿಯೊ ಮತ್ತು ಇತರ ವಸ್ತುಗಳ ಆಳವಾದ ತನಿಖೆಯು ಯಾವುದೇ ಸಮುದಾಯದ ವಿರುದ್ಧ ಯಾವುದೇ ದ್ವೇಷದ ಭಾಷಣವನ್ನು ನೀಡಿಲ್ಲ ಎಂದು ಕಂಡುಬಂದಿದೆ. ಆದ್ದರಿಂದ, ಉದ್ದೇಶಿತ ವೀಡಿಯೊ ಕ್ಲಿಪ್‌ನ ತನಿಖೆ ಮತ್ತು ಅವಲೋಕನದ ನಂತರ ಆಪಾದಿತ ಭಾಷಣದಲ್ಲಿ ಯಾವುದೇ ದ್ವೇಷದ ಭಾಷಣದ ಅಂಶಗಳು ಪತ್ತೆಯಾಗದಿರುವ ತೀರ್ಮಾನಿಸಲಾಯಿತು ಎಂದು ದೆಹಲಿ ಪೊಲೀಸರು ಸುಪ್ರೀಮ್ ಕೋರ್ಟ್ ಸಲ್ಲಿಸಿದ ಅಫಿದಾವಿತ್ ನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

“ಮುಸ್ಲಿಮರ ನರಮೇಧದ ಮುಕ್ತ ಕರೆಗಳು” ಎಂದು ಅರ್ಥೈಸುವ ಅಥವಾ ಅರ್ಥೈಸಬಹುದಾದ ಅಂತಹ ಪದಗಳ ಬಳಕೆಯಿಲ್ಲ. ಯುವ ವಾಹಿನಿ ಸಭೆಯಲ್ಲಿ “ತಮ್ಮ ಸಮುದಾಯದ ನೈತಿಕತೆಯನ್ನು ಉಳಿಸುವ ಉದ್ದೇಶದಿಂದ” ಜನರು ಒಟ್ಟುಗೂಡಿದರು ಎಂದು ಹೇಳಲಾಗಿದೆ.

ಹರಿದ್ವಾರ ಧರ್ಮ ಸಂಸದ್ ಭಾಷಣಗಳಿಗೆ ಸಂಬಂಧಿಸಿದ ಆರೋಪಗಳು ತನ್ನ ವ್ಯಾಪ್ತಿಯನ್ನು ಮೀರಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

Join Whatsapp