ಹುಬ್ಬಳ್ಳಿ ಗಲಭೆಗೆ ಪ್ರಚೋದಿಸಿದ ಅಭಿಷೇಕ್ ಹಿರೇಮಠ್’ಗೆ ಪಿಯು ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಕೋರಿ ಮನವಿ !

Prasthutha|

ಹುಬ್ಬಳ್ಳಿ: ಪ್ರಚೋದನಾತ್ಮಕ ಪೋಸ್ಟ್ ಹಾಕಿ ಹುಬ್ಬಳ್ಳಿ ಗಲಭೆಗೆ ಪ್ರಚೋಧಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಶದಲ್ಲಿರುವ ಆರೋಪಿ ಅಭಿಶೇಕ್ ಹಿರೇಮಠ್’ಗೆ ಪಿಯುಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಆರೋಪಿ ಪರ ವಕೀಲ ಸಂಜು ಬಡಾಸ್ಕರ್ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ವಿನಂತಿಸಿದ್ದಾರೆ.

- Advertisement -


ಆರೋಪಿ ಅಭಿಷೇಕ್ ಹಿರೇಮಠ ಪರ ಹಿಂದೂ ವಕೀಲರ ವೇದಿಕೆ ಮತ್ತು ವಿಶ್ವ ಹಿಂದೂ ಪರಿಷತ್ ವಕೀಲರು ವಾದ ಮಂಡಿಸಲಿದ್ದು, ಬುಧವಾರ ಸರಕಾರ ನ್ಯಾಯಾಲಯದಲ್ಲಿ ವಾದ ಮಂಡಿಸಲಿದ್ದಾರೆ. ಗಲಭೆಯ ಆರೋಪಿಗೆ ಪದವಿ ಪೂರ್ವ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಸಂಜಯ್ ಹೇಳಿದ್ದಾರೆ.


ಹುಬ್ಬಳ್ಳಿ ಗಲಭೆಯ ಘಟನೆಗೆ ಸಂಬಂಧಿಸಿ ಹಳೇ ಟೌನ್ ಪೊಲೀಸರು ಆರೋಪಿ ಅಭಿಷೇಕ್ ಹಿರೇಮಠ್ ನನ್ನು ಬಂಧಿಸಿದ್ದರು. ಬಳಿಕ ಆರೋಪಿಯನ್ನು ನಾಲ್ಕನೇ ನ್ಯಾಯಾಂಗ ಪ್ರಥಮ ದರ್ಜೆ ಮತ್ತು ಹೆಚ್ಚುವರಿ ಸತ್ರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಪಡೆದಿದ್ದಾರೆ. ಆರೋಪಿ ಅಭಿಷೇಕ್’ಗೆ ಏಪ್ರಿಲ್ 30 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

Join Whatsapp