22 ಭಾಗಗಳಾಗಿ ಕತ್ತರಿಸಿ ವ್ಯಕ್ತಿಯ ಕೊಲೆ: ಪತ್ನಿ, ಮಗನ ಬಂಧನ

Prasthutha|

ನವದೆಹಲಿ: ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ ಹಸಿ ಆಗಿರುವಾಗಲೇ ಇದನ್ನೇ ಹೋಲುವ ಮತ್ತೊಂದು ಕೊಲೆ ದೆಹಲಿಯಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬರನ್ನು 22 ತುಂಡುಗಳಾಗಿ ಕತ್ತರಿಸಿ ಕೊಲೆ ನಡೆಸಲಾಗಿದೆ. ಆ ಬಳಿಕ ಮೃತದೇಹದ ಭಾಗಗಳನ್ನು ಪೂರ್ವ ದೆಹಲಿಯಾದ್ಯಂತ ಎಸೆಯುವ ಉದ್ದೇಶದಿಂದ ಪ್ರಿಡ್ಜ್’ನಲ್ಲಿರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಮೃತ ಅಂಜನ್ ದಾಸ್ ಎಂಬಾತನ ಹೆಂಡತಿ ಪೂನಂ ಮತ್ತು ಮಲಮಗ ದೀಪಕ್ ಎಂಬವರನ್ನು ಐಪಿಸಿ ಸೆಕ್ಷನ್ 302, 201ರ ಅಡಿಯಲ್ಲಿ ಪೂರ್ವ ದೆಹಲಿಯ ಪಾಂಡವ್ ನಗರದಿಂದ ಬಂಧಿಸಿದ್ದಾರೆ.

ಮೃತ ಅಂಜನ್ ದಾಸ್’ಗೆ ಬಿಹಾರದಲ್ಲಿ ಪತ್ನಿ ಮತ್ತು ಎಂಟು ಗಂಡು ಮಕ್ಕಳಿದ್ದಾರೆ, ಆದರೆ ಆತ ಪೂನಂ ಅವರಿಂದ ಈ ಸತ್ಯವನ್ನು ಮರೆಮಾಚಿದ್ದಾನೆ. ದೇಹದ ಭಾಗಗಳನ್ನು ಹೊಂದಾಣಿಕೆ ಮಾಡಲು ದಾಸ್ ಅವರ ಸಂಬಂಧಿಕರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲು ತಂಡವನ್ನು ಅಲ್ಲಿಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಮೃತ ದಾಸ್ ತನ್ನ ಮಲಮಗಳು ಮತ್ತು ಮಲಮಗನ ಹೆಂಡತಿಯ ಮೇಲೆ ಕಣ್ಣಿಟ್ಟಿದ್ದಾನೆ ಎಂಬ ಅನುಮಾನದಿಂದ ತಾಯಿ-ಮಗ ಇಬ್ಬರೂ ದಾಸ್ ಅವರನ್ನು ಕೊಂದಿದ್ದಾರೆ. ಅವರು ಮೂರು, ನಾಲ್ಕು ದಿನಗಳ ಅವಧಿಯಲ್ಲಿ ಪೂರ್ವ ದೆಹಲಿಯ ವಿವಿಧ ಸ್ಥಳಗಳಲ್ಲಿ ದೇಹದ ಭಾಗಗಳನ್ನು ವಿಲೇವಾರಿ ಮಾಡಿದ್ದಾರೆ ಮತ್ತು ತಲೆಬುರುಡೆಯನ್ನು ಹೂಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲು ದಾಸ್ ಅವರ ಪಾನೀಯದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ, ಪ್ರಜ್ಞೆ ತಪ್ಪಿಸಲಾಗಿದೆ. ಬಳಿಕ ಚಾಕು ಮತ್ತು ಕಠಾರಿ ಬಳಸಿ ಹತ್ಯೆಗೈದಿರುವುದಾಗಿ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಆ ಬಳಿಕ ಅವರು ಅವನ ಗಂಟಲನ್ನು ಸೀಳಿದರು ಮತ್ತು ಅದನ್ನು ತುಂಡುಗಳಾಗಿ ಕತ್ತರಿಸುವ ಮೊದಲು ರಕ್ತವು ಸಂಪೂರ್ಣವಾಗಿ ಹರಿಯುವವರೆಗೆ ಕಾಯುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Join Whatsapp