ಮಲ್ಲಿಕಟ್ಟೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಜೆಡಿಎಸ್ ವಾರ್ಡ್ ಮಟ್ಟದ ಚುನಾವಣಾ ಪೂರ್ವಭಾವಿ ಸಭೆ

Prasthutha|

ಮಂಗಳೂರು: ಮಲ್ಲಿಕಟ್ಟೆಯ ಸುಮಾ ಸಧನ ಸಭಾಂಗಣದಲ್ಲಿ ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ಪಕ್ಷದ ಚುನಾವಣೆ ಪೂರ್ವಭಾವಿ ಸಭೆ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು.

- Advertisement -


ಸಮಾರಂಭದ ಅಧ್ಯಕ್ಷತೆಯನ್ನು ಜೆಡಿಏಸ್ ಅಭ್ಯರ್ಥಿ ಸುಮತಿ ಎಸ್ ಹೆಗ್ಡೆ ವಹಿಸಿದ್ದರು. ದ.ಕ. ಜಿಲ್ಲಾ ಜನತಾದಳ ( ಜಾ) ಇದರ ಅಧ್ಯಕ್ಷ ಜಾಕೆ ಮಾಧವ ಗೌಡ ಉದ್ಘಾಟಿಸಿದರು. ರಾಜ್ಯ ವಕ್ತಾರ ಎಂ. ಬಿ. ಸದಾಶಿವ ಜೆಡಿಎಸ್ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಹಾಗೂ ಯೋಜನೆಗಳನ್ನು ಸವಿಸ್ತಾರವಾಗಿ ವಿವರಿಸಿದರು.


ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾತನಾಡಿ, ಜೆಡಿಎಸ್ ಪಕ್ಷದ ಬೆಳವಣಿಗೆ ಹಾಗೂ ಮುಂದಿರುವ ಸವಾಲುಗಳ ಬಗ್ಗೆ ಮಾತನಾಡಿದರು. ದ..ಕ . ಜಿಲ್ಲಾ ಕಾರ್ಯಾಧ್ಯಕ್ಷ ವಸಂತ ಪೂಜಾರಿ ಮಾತನಾಡಿ, ಬೂತ್ ಮಟ್ಟದ ಕಾರ್ಯಕರ್ತರ ನಿರ್ವಹಣೆಯ ಬಗ್ಗೆ ತಿಳಿಸಿದರು.

- Advertisement -


ವೇದಿಕೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಝಮೀರ್ ಶಾ, ದ.ಕ.ಜಿಲ್ಲಾ ಮಹಿಳಾ ಜೆಡಿಎಸ್ ಅಧ್ಯಕ್ಷೆ ರಮೀಝಾ ನಾಸಿರ್, ರಾಜ್ಯ ಮೀನುಗಾರಿಕಾ ಅಧ್ಯಕ್ಷ ರತ್ನಾಕರ ಸುವರ್ಣ, ಅನಿವಾಸಿ ಜೆಡಿಎಸ್ ಮುಖಂಡ ಅಶ್ರಫ್ ಕೋಝಿಕಾನ್, ವಿಧ್ಯಾರ್ಥಿ ಜನತಾದಳ ಅಧ್ಯಕ್ಷ ಬಿಲಾಲ್, ಲತೀಫ್ ಬೆಂಗರೆ, ನಾಸಿರ್ ಬಂದರ್, ಜಾವೇದ್ ಪಾಂಡೇಶ್ವರ, ಜೆಡಿಎಸ್ ಮುಖಂಡರಾದ ಪುಷ್ಪರಾಜನ್, ರಾಮ್ ಗಣೇಶ್, ಮುನೀರ್ ಮುಕ್ಕಚ್ಷೇರಿ, ಲತೀಫ್ ಶಿವಭಾಗ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಪ್ರ.ಕಾರ್ಯದರ್ಶಿ ಅಲ್ತಾಫ್ ತುಂಬೆ, ಪಧಾಧಿಕಾರಿಗಳಾದ ಇಝಾ ಬಜಾಲ್, ದಿನೇಶ್ ಪಾಯಿಸ್, ರಫೀಕ್ ಕಣ್ಣೂರು, ಶಫೀಕ್ ಆಲಡ್ಕ, ಭಾರತೀ ಪುಷ್ಪರಾಜನ್, ಕವಿತಾ , ಶಾರದಾ ಶೆಟ್ಟಿ, ವೀಣಾ ಶೆಟ್ಟಿ, ಚೂಡಾಮಣಿ ಹಾಗೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Join Whatsapp