ಮಂಗಳೂರು: ಶೌಚಾಲಯಕ್ಕೆ ಗುಂಡಿ ತೋಡುವಾಗ ಮಣ್ಣು ಕುಸಿದು ಓರ್ವ ಮೃತ್ಯು; ಇಬ್ಬರಿಗೆ ಗಾಯ

Prasthutha|

ಮಂಗಳೂರು: ಮನೆಯೊಂದರ ಶೌಚಾಲಯಕ್ಕೆ ಗುಂಡಿ ತೋಡುವ ವೇಳೆ ಮಣ್ಣು ಕುಸಿದು ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರಿನ ಅಳಕೆ ಎಂಬಲ್ಲಿ ನಡೆದಿದೆ.

- Advertisement -

ಮೃತಪಟ್ಟ ವ್ಯಕ್ತಿಯನ್ನು 63 ವರ್ಷದ ಆದಂ ಎಂದು ಗುರುತಿಸಲಾಗಿದೆ. ಇಬ್ರಾಹೀಂ ಮತ್ತು ಇಮ್ತಿಯಾಝ್ ಎಂಬವರು ಗಾಯಗೊಂಡಿದ್ದಾರೆ.

ಇಂದು(ಮಂಗಳವಾರ) ಸಂಜೆ ಆರಿಫ್ ಎಂಬವರಿಗೆ ಸೇರಿದ ಮನೆಯಲ್ಲಿ ಶೌಚಾಲಯಕ್ಕೆ ಮೂವರು ಕಾರ್ಮಿಕರು ಗುಂಡಿ ತೋಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಮಣ್ಣು ಕುಸಿದು ಬಿದ್ದಿದ್ದು, ಆದಂ ಎಂಬವರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಇತರ ಇಬ್ಬರು ಕಾರ್ಮಿಕರಾದ ಇಬ್ರಾಹೀಂ ಮತ್ತು ಇಮ್ತಿಯಾಝ್ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಸ್ಥಳಕ್ಕೆ ಭೇಟಿ ನೀಡಿದ ಬಜ್ಪೆ ಪೊಲೀಸರು ಪರಿಶೀಲನೆ ನಡೆಸಿ,  ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp