ಭಾರತ -ಚೀನಾ ಸಂಘರ್ಷಕ್ಕೆ ನೆಹರು ಕಾರಣ ಎಂದ ಸಿ.ಟಿ ರವಿ!

Prasthutha|

ಬೆಂಗಳೂರು: ನೆರೆ ರಾಷ್ಟ್ರವಾದ ಚೀನ ಪದೇ ಪದೇ ಭಾರತವನ್ನು ಕೆಣಕುತ್ತಿದ್ದು, ಅರುಣಾಚಲಪ್ರದೇಶದ ತವಾಂಗ್ ಗಡಿಯಲ್ಲಿ ಚೀನಿ ಸೈನಿಕರು ಪುಂಡಾಟ ತೋರಿಸಿದ್ದಾರೆ. ಭಾರತ-ಚೀನಾಇಂದಿನ ಸಂಘರ್ಷಕ್ಕೆ ನೆಹರೂ ಅವರೇ ಕಾರಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆರೋಪಿಸಿದ್ದಾರೆ

- Advertisement -

ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಸಂಘರ್ಷಕ್ಕೆ ಮೂಲ ಕಾರಣ ನೆಹರೂ. ಹಿಂದಿ ಚೀನಿ ಭಾಯಿ-ಭಾಯಿ ಅಂತಾ ಪ್ರಮಾದ ಮಾಡಿದ್ದು ನೆಹರೂ. ಅವರ ಪ್ರಮಾದದಿಂದ ಚೀನಾವು ಭಾರತದ ಮೇಲೆ ದಾಳಿ ಮಾಡುತ್ತಿದೆ. ಈ ವಿಚಾರ ಕಾಂಗ್ರೆಸ್ ಸಣ್ಣದಾಗಿ ಮಾತನಾಡಬಾರದು ಎಂದು ಹೇಳಿದ್ದಾರೆ.

ಚೀನಾದವರು ಗಡಿ ವಾಸ್ತವ ರೇಖೆ ದಾಟಿ ಬಂದಾಗೆಲ್ಲ ಸಂಘರ್ಷ ಆಗುತ್ತೆ. ಆದರೆ ಕಾಂಗ್ರೆಸ್ ಇದರಲ್ಲಿ ಸಣ್ಣ ರಾಜಕಾರಣ ಮಾಡುತ್ತಿದೆ.. ಕಾಶ್ಮೀರದಲ್ಲೂ ಕಾಂಗ್ರೆಸ್ ಸಣ್ಣತನ ಪ್ರದರ್ಶಿಸಿತು. ಈ ಬೆಳವಣಿಗೆ ಸರಿಯಲ್ಲ. ಚೀನಾವನ್ನು ಟಿಬೆಟ್ ನಲ್ಲೇ ತಡೆದು ನಿಲ್ಲಿಸಿದ್ದರೆ ಅವರು ಇಲ್ಲಿಯವರೆಗೆ ಬರ್ತಿರ್ಲಿಲ್ಲ. ಇದು ಕಾಂಗ್ರೆಸ್ ಕಾಲದಲ್ಲೇ ಮಾಡಬೇಕಾಗಿತ್ತು, ಅವರು ಮಾಡಲಿಲ್ಲ. ಈ ಪ್ರಮಾದದಿಂದ ಸಮಸ್ಯೆ ಈಗ ಆಗುತ್ತಿದೆ ಎಂದು ಹೇಳಿದ್ದಾರೆ.

Join Whatsapp