ಮಂಗಳೂರು | VHP ಕಾರ್ಯಕರ್ತನ ಕೊಲೆ ಯತ್ನಕ್ಕೆ ಬಿಗ್ ಟ್ವಿಸ್ಟ್: ಪೊಲೀಸರಿಂದ ನಿಜಾಂಶ ಬಯಲು

Prasthutha|

ಮಂಗಳೂರು: ವಿಎಚ್ ಪಿ ಕಾರ್ಯಕರ್ತನೋರ್ವ ನನ್ನನ್ನು ಹಂತಕರು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೆದರಿ ಪೊಲೀಸರಿಗೆ ದೂರು ನೀಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆತನನ್ನು ಹಿಂಬಾಲಿಸಿದ್ದು, ಹಂತಕರಲ್ಲ, ಡೆಲಿವರಿ ಬಾಯ್ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

- Advertisement -


ಸೋಮವಾರ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಪೊಲೀಸರಿಗೆ ದೂರು ನೀಡಿದ್ದು, ಆಗಸ್ಟ್ 2ರಂದು ನಗರದ ಬಜ್ಪೋಡಿ – ಬಿಕರ್ನಕಟ್ಟೆ ಎಂಬಲ್ಲಿ ತಮ್ಮ ಕಾರನ್ನು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಅಪರಿಚಿತರು ಹಿಂಬಾಲಿಸಿದ್ದಾರೆ. ಅಲ್ಲದೇ ಆಗಸ್ಟ್ 7 ರಂದು ರಾತ್ರಿ ಸುಮಾರು 10:30ಕ್ಕೆ ಹೆಲ್ಮೆಟ್ ಧರಿಸಿ ಬಂದ ಬೈಕ್ ಸವಾರರು ಬೈಕ್ ಅನ್ನು ನನ್ನ ಕಾರಿಗೆ ತಾಗಿಸಿ ಪರಾರಿಯಾಗಿದ್ದಾರೆಂದು ಉಲ್ಲೇಖಿಸಿದ್ದರು.


ವಿಶ್ವ ಹಿಂದೂ ಪರಿಷತ್ ನಾಯಕ ಈ ರೀತಿ ದೂರು ನೀಡುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದವರು ಹಂತಕರಲ್ಲ, ಬದಲಾಗಿ ಫುಡ್ ಡೆಲಿವರಿ ಬಾಯ್ ಎಂಬ ವಿಚಾರ ಬಯಲಿಗೆ ಬಂದಿದೆ. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನ ಮನೆಯ ಪಕ್ಕದ ಮನೆಯ ನಿವಾಸಿಯೊಬ್ಬರು ಫುಡ್ ಆರ್ಡರ್ ಮಾಡಿದ್ದರು. ಹೀಗಾಗಿ ಫುಡ್ ಡೆಲಿವರಿ ಮಾಡಲೆಂದು ಡೆಲಿವರಿ ಬಾಯ್ ಕಾರ್ಯಕರ್ತನ ಪಕ್ಕದ ಮನೆಗೆ ಆಗಮಿಸಿದ್ದರು.

- Advertisement -


ಆದರೆ ಡೆಲಿವರಿ ಬಾಯ್ ತನ್ನನ್ನು ಕೊಲೆ ಮಾಡಲು ಬಂದಿರುವ ಹಂತಕ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ತಪ್ಪಾಗಿ ಭಾವಿಸಿದ್ದಾರೆ. ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಪೊಲೀಸರಿಗೆ ಅಸಲಿ ವಿಚಾರ ತಿಳಿದು ಬಂದಿದೆ.

Join Whatsapp