ಮಂಗಳೂರು| ನೋಟಿನ ಬಂಡಲ್ ಸಿಕ್ಕಿದ ಪ್ರಕರಣ; ಹಣ ತೆಗೆದುಕೊಂಡವರು ತಕ್ಷಣವೇ ಹಿಂದಿರುಗಿಸಬೇಕು: ಪೊಲೀಸ್ ಆಯುಕ್ತ ಎನ್. ಶಶಿಕುಮಾರ್

Prasthutha|


ಮಂಗಳೂರು: ನಗರದ ಪಂಪ್’ವೆಲ್ ಬಸ್ ನಿಲ್ದಾಣದ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ನ.26 ರಂದು ಶಿವರಾಜ್ ಎಂಬವರಿಗೆ ನೋಟಿನ ಬಂಡಲ್’ಗಳು ಸಿಕ್ಕಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

- Advertisement -


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವರಾಜ್ ಅವರು ನೋಟಿನ ಬಂಡಲ್’ನಲ್ಲಿ ಕೆಲ ನೋಟುಗಳನ್ನು ತುಕಾರಾಮ್ ಎನ್ನುವವರಿಗೆ ನೀಡಿದ್ದು, ತುಕಾರಾಮ್ ಮನೆಯವರು 2.99 ಲ.ರೂ.ಗಳನ್ನು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವರಾಜ್ ಅವರ ಕೈಯಲ್ಲಿದ್ದ 49,000 ರೂ. ಕೂಡ ಪೊಲೀಸರ ಸುಪರ್ದಿಯಲ್ಲಿದೆ ಎಂದು ಹೇಳಿದರು.


ಬಂಡಲ್’ಗಳಲ್ಲಿ ಒಟ್ಟು ಎಷ್ಟು ಹಣ ಇತ್ತು. ಅದನ್ನು ಯಾರು ತಂದಿಟ್ಟಿದ್ದರು. ಆ ಬಂಡಲ್ ನಿಂದ ಬೇರೆ ಯಾರಾದರೂ ಹಣ ಪಡೆದುಕೊಂಡು ಹೋಗಿದ್ದಾರೆಯೇ ಎಂಬ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾರಾದರೂ ಹಣ ಪಡೆದುಕೊಂಡು ಹೋಗಿದ್ದರೆ ವಾಪಸ್ ನೀಡಬೇಕು. ಅವರ ವಿರುದ್ದ ಯಾವುದೇ ಕೇಸು ದಾಖಲಿಸುವುದಿಲ್ಲ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

Join Whatsapp