‘ಶಿವಸೇನೆ ಎಂದಿಗೂ ಬಿಜೆಪಿಯ ಗುಲಾಮಗಿರಿಯಾಗುವುದಿಲ್ಲ’: ಬೃಹತ್ ದಸರಾ ರ್‍ಯಾಲಿಯಲ್ಲಿ ಠಾಕ್ರೆ ಬಣದವರಿಂದ ಬ್ಯಾನರ್ ಅಳವಡಿಕೆ

Prasthutha|

ಮುಂಬೈ: ಶಿವಸೇನೆ ಹಮ್ಮಿಕೊಂಡ ದಸರಾ ರ್‍ಯಾಲಿಯಲ್ಲಿ ಬಾಳ್ ಠಾಕ್ರೆ ಅವರ ಭಾವ ಚಿತ್ರದೊಂದಿಗೆ ಉದ್ಧವ್ ಠಾಕ್ರೆ ಬಣದವರಿಂದ ‘ಶಿವಸೇನೆಯು ಬಿಜೆಪಿಯ ಗುಲಾಮಗಿರಿಯಾಗಲು ನಾನು ಬಿಡುವುದಿಲ್ಲ’ ಎಂಬ ಸಂದೇಶದೊಂದಿಗೆ ಬ್ಯಾನರ್ ಒಂದನ್ನು ಅಳವಡಿಸಿರುವುದು ಗೋಚರವಾಗಿದೆ.

- Advertisement -

ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಎರಡು ಪ್ರತಿಸ್ಪರ್ಧಿ ಬಣಗಳು ಇಂದು ಮುಂಬೈನಲ್ಲಿ ಹಮ್ಮಿಕೊಂಡಿದ್ದ ಬೃಹತ್ ದಸರಾ ರ್‍ಯಾಲಿಯಲ್ಲಿ ಈ ದೃಶ್ಯ ಸೆರೆಯಾಗಿದೆ.

ಜೂನ್‌ ತಿಂಗಳಲ್ಲಿ ವಿಭಜನೆಯಾದ ಬಳಿಕ ಎರಡು ಬಣಗಳು ಇಂದು ಹಮ್ಮಿಕೊಂಡಿದ್ದ ದಸರಾ ರ್‍ಯಾಲಿಯು ಶಕ್ತಿ ಪ್ರದರ್ಶನದ ಸಂಕೇತವಾಗಿದೆ.

Join Whatsapp