ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ ಬರೆದ ಮಧುಗಿರಿ ಮೋದಿ

Prasthutha|

ತುಮಕೂರು : ನನಗೆ ದಯಾಮರಣ ನೀಡಿ ಎಂದು ರಾಜ್ಯ ಹಿಂದು ಸಾಮ್ರಾಟ್ ಧರ್ಮಸೇನೆಯ ಸಂಸ್ಥಾಪಕ ಮಧುಗಿರಿ ಮೋದಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಲವ್ ಜಿಹಾದ್ , ಗೋಹತ್ಯೆ , ಅತ್ಯಾಚಾರ , ಭಯೋತ್ಪಾದನೆ, ಭ್ರಷ್ಟಾಚಾರ ವಿರುಧ್ದ ನಿರಂತರ ಹೋರಾಟ ನಡೆಸುತ್ತಿದ್ದೇನೆ, ಆದರೆ ಜಿಲ್ಲಾ ಪೋಲಿಸ್ ಇಲಾಖೆ ನನ್ನನ್ನು ನಿರಂತರ ವಿಚಾರಣೆ ನೆಪದಲ್ಲಿ ಮಾನಸಿಕವಾಗಿ ಕಿರುಕುಳ ನೀಡುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

- Advertisement -

ಪೋಲಿಸರು ಹಲವು ಬಾರಿ ನನ್ನನ್ನು ಸುಳ್ಳು ಕೇಸು ದಾಖಲಿಸಿ ಬಂಧಿಸಿದ್ದಾರೆ, ಆದರೆ ಹಿಂದು ಸಮಾಜ ನನ್ನ ಬೆಂಬಲಕ್ಕೆ ನಿಲ್ಲದಿರುವುದು ಬೇಸರವಾಗಿದೆ , ಸದಾ ಪೋಲಿಸರ ಕಿರುಕುಳವನ್ನು ಸಹಿಸಲಾಗುತ್ತಿಲ್ಲ , ಆದ್ದರಿಂದ ನನಗೆ ದಯಾಮರಣವನ್ನು ನೀಡಿ ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದೇನೆ ಎಂದು ಮಧುಗಿರಿ ಮೋದಿ ತಿಳಿಸಿದ್ದಾರೆ.

ಅತ್ಯಾಚಾರಿಗಳು, ಭ್ರಷ್ಟರು, ಭಯೋತ್ಪಾಧಕರಿಗಿಲ್ಲದ ವಿಚಾರಣೆ, ಮಾನಸಿಕ ಕಿರುಕುಳ ನನಗೇಕೆ ? ಇದನ್ನೆಲ್ಲಾ ಪ್ರಶ್ನಿಸಲು ನನ್ನವರ್ಯಾರೂ ಇಲ್ಲ ನಾನೇ ಪ್ರಶ್ನಿಸಬೇಕು ಎಂದಿದ್ದಾರೆ.

Join Whatsapp