ಲಕ್ಷದ್ವೀಪ ಕಾಂಗ್ರೆಸ್ ನಿಯೋಗದಿಂದ ಡಿ.ಕೆ. ಶಿವಕುಮಾರ್ ಭೇಟಿ, ಹಸುಗೂಸುವಿನ ಚಿಕಿತ್ಸೆಗೆ ನೆರವಾಗಲು ಮನವಿ

Prasthutha|

ಬೆಂಗಳೂರು: ಲಕ್ಷದ್ವೀಪ ಕಾಂಗ್ರೆಸ್ ಸಮಿತಿ (ಎಲ್ಟಿಸಿಸಿ) ಅಧ್ಯಕ್ಷ ಹಾಗೂ ಮಾಜಿ ಸಂಸದ ಎಂ. ಹಮ್ದುಲ್ಲ ಸಯೀದ್ ನೇತೃತ್ವದ ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಲಕ್ಷದ್ವೀಪ ಮೂಲದ ಕರ್ನಾಟಕದಲ್ಲಿ ನೆಲೆಸಿರುವ ನಜರ್ ಅವರ ಎರಡು ತಿಂಗಳ ಹಸುಗೂಸುವಿನ ಚಿಕಿತ್ಸೆಗೆ ನೆರವಾಗುವಂತೆ ಮನವಿ ಸಲ್ಲಿಸಿತು.

- Advertisement -


ನಜರ್ ಅವರ ಪುತ್ರಿ ಇಶಾಲ್ ಮರ್ಯಮ್ ಮಾರಣಾಂತಿಕ ಸ್ಪೈನಲ್ ಮಸ್ಕುಲರ್ ಅಟ್ರೋಪಿ ಕಾಯಿಲೆಯಿಂದ ಬಳಲುತ್ತಿದ್ದು, ಇದರ ಚಿಕಿತ್ಸೆಗೆ ಅಗತ್ಯವಿರುವ ಇಂಜಕ್ಷನ್ ಅನ್ನು ಅಮೆರಿಕದಿಂದ ತರಿಸಬೇಕಿದೆ. ಅದಕ್ಕೆ 16 ಕೋಟಿ ರುಪಾಯಿ ಖರ್ಚಾಗಲಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.


ಹಿರಿಯ ಕಾಂಗ್ರೆಸ್ ಮುಖಂಡ ಯುಸಿಕೆ ತಂಞಳ್, ಎಲ್ಟಿಸಿಸಿ ಉಪಾಧ್ಯಕ್ಷ ಬಿ. ಹಸನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಂ, ಸಾಹುಲ್ ಹಮೀದ್, ಅಜಾಸ್ ಅಕ್ಬರ್ ನಿಯೋಗದಲ್ಲಿದ್ದರು.

Join Whatsapp