ಹಿಜಾಬ್ ತೀರ್ಪು : ಕರ್ನಾಟಕ ಬಂದ್ ಗೆ ಕೊಡಗು ಮುಸ್ಲಿಂ ಜಮಾಅತ್’ಗಳ ಒಕ್ಕೂಟ ಬೆಂಬಲ

Prasthutha|

ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲವೆಂದು ತಿರ್ಪಿತ್ತಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಅಮೀರ್ ಎ ಶರಿಯತ್ ಮುಖ್ಯಸ್ಥರಾದ ಮೌಲಾನಾ ಸಗೀರ್ ಅಹಮದ್ ರವರು ಕರೆ ನೀಡಿರುವ ನಾಳಿನ ಶಾಂತಿಯುತ ಕರ್ನಾಟಕ ಬಂದ್ ಗೆ ಕೊಡಗು ಮುಸ್ಲಿಂ ಜಮಾಅತ್’ಗಳ ಒಕ್ಕೂಟ ಸಂಪೂರ್ಣ ಬೆಂಬಲವನ್ನು ಘೋಷಿಸಲಿದೆ ಎಂದು ಸಂಘಟನೆ ತಿಳಿಸಿದೆ.

- Advertisement -

ತೀರ್ಪು ಸಾಂವಿಧಾನಿಕ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣ ಹಕ್ಕುಗಳನ್ನು ಕಸಿದು ಕೊಳ್ಳುವ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಈ ನಿಟ್ಟಿನಲ್ಲಿ ಕೊಡಗು ಪರಿಸರದಲ್ಲಿ ಸ್ವಯಂ ಪ್ರೇರಿತ ಶಾಂತಿಯುತವಾಗಿ ವ್ಯವಹಾರ ಸ್ಥಗಿತ ಮಾಡಬೇಕಾಗಿ ವಿನಂತಿಸುತ್ತೇವೆ. ಈ ವ್ಯವಹಾರ ಸ್ಥಗಿತ ಶಾಂತಿಯುತವಾಗಿರುತ್ತದೆ. ಕಾನೂನು,  ಶಾಂತಿ ಸುವ್ಯವಸ್ಥೆ ಪಾಲನೆಗೆ ಪೂರಕವಾಗಿರಲಿ ಎಂದು ಸಂಘಟನೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Join Whatsapp