ಹಿಜಾಬ್ ತೀರ್ಪು : ನಾಳಿನ ಕರ್ನಾಟಕ ಬಂದ್ ಗೆ ಸುರತ್ಕಲ್ ಮುಸ್ಲಿಂ ಐಕ್ಯತಾ ವೇದಿಕೆ ಸಂಪೂರ್ಣ ಬೆಂಬಲ

Prasthutha|

ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲವೆಂದು ತಿರ್ಪಿತ್ತಿದ್ದ ಕರ್ನಾಟಕ ಹೈಕೊರ್ಟ್ ತೀರ್ಪನ್ನು ವಿರೋಧಿಸಿ ಅಮೀರ್ ಎ ಶರಿಯತ್ ಮುಖ್ಯಸ್ಥರಾದ ಮೌಲಾನಾ ಸಗೀರ್ ಅಹಮದ್ ರವರು ಕರೆ ನೀಡಿರುವ ನಾಳಿನ ಶಾಂತಿಯುತ ಕರ್ನಾಟಕ ಬಂದ್ ಗೆ ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್ ಘಟಕವು ಸಂಪೂರ್ಣ ಬೆಂಬಲವನ್ನು ಘೋಷಿಸಲಿದೆ ಎಂದು ಸಂಘಟನೆಯ ಅಧ್ಯಕ್ಷ ಅಶ್ರಫ್ ಬದ್ರಿಯಾ ಹೇಳಿದ್ದಾರೆ.

- Advertisement -

ತೀರ್ಪು ಸಾಂವಿಧಾನಿಕ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣ ಹಕ್ಕುಗಳನ್ನು ಕಸಿದು ಕೊಳ್ಳುವ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಈ ನಿಟ್ಟಿನಲ್ಲಿ ಸುರತ್ಕಲ್ ಪರಿಸರದಲ್ಲಿ ಸ್ವಯಂ ಪ್ರೇರಿತ ಶಾಂತಿಯುತವಾಗಿ ವ್ಯವಹಾರ ಸ್ಥಗಿತ ಮಾಡಬೇಕಾಗಿ ವಿನಂತಿಸುತ್ತೇವೆ. ಈ ವ್ಯವಹಾರ ಸ್ಥಗಿತ ಶಾಂತಿಯುತವಾಗಿರುತ್ತದೆ. ಕಾನೂನು,  ಶಾಂತಿ ಸುವ್ಯವಸ್ಥೆ ಪಾಲನೆಗೆ ಪೂರಕವಾಗಿರಲಿ ಎಂದು ಅಶ್ರಫ್ ಬದ್ರಿಯಾ ಅವರು ಮಾಹಿತಿ ನೀಡಿದ್ದಾರೆ.

Join Whatsapp