ಕೆ.ಎಂ. ಶರೀಫ್ ನಿಧನ ಸಮುದಾಯಕ್ಕೆ ತುಂಬಲಾರದ ನಷ್ಟ : ಇಂಡಿಯಾ ಫ್ರಟರ್ನಿಟಿ ಫೋರಂ, ಸೌದಿ ಅರೇಬಿಯಾ

Prasthutha|

ಪಿ.ಎಫ್.ಐ. ರಾಷ್ಟ್ರೀಯ ನಾಯಕ ಕೆ.ಎಂ. ಶರೀಫ್ ರವರ ನಿಧನವು  ಸಮುದಾಯ ಹಾಗೂ ಸಂಘಟಿತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಇಂಡಿಯಾ ಫ್ರಟರ್ನಿಟಿ ಫೋರಂ ಕರ್ನಾಟಕ ಚಾಪ್ಟರ್, ಸೌದಿ ಅರೇಬಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

ತನ್ನ ಜೀವನದ ಬಹುಪಾಲು ಸಮಯವನ್ನು ಸಮುದಾಯ ಸಬಲೀಕರಣಕ್ಕಾಗಿ ಮುಡಿಪಾಗಿಟ್ಟು, ದಲಿತ, ದಮನಿತ, ಅಲ್ಪಸಂಖ್ಯಾತ ಶ್ರೇಯೋಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ಹಾಗೂ ಕರಾವಳಿಯಲ್ಲಿ ಪ್ಯಾಶಿಸ್ಟರ ಅಟ್ಟಹಾಸದ ವಿರುಧ್ದ ಯುವಕರನ್ನು  ಸಂಘಟಿಸಿ ತದ ನಂತರ ರಾಷ್ಟ್ರಾದ್ಯಂತ ಸಬಲೀಕರಣದ ಸಂದೇಶವನ್ನು ಹೊತ್ತು ಸಂಚರಿಸಿ, ಸಂಚಲನ ಮೂಡಿಸಿದ ಅವರ ಸೇವೆಯು ಇಂದು ಜನಮಾನಸದಲ್ಲಿ ಹಸಿರಾಗಿದೆ.

ದಣಿವರಿಯದ ಈ ನಾಯಕನ ಮಾದರಿ ಜೀವನ ಹಾಗೂ ಅವರ ಸೈದ್ಧಾಂತಿಕ ಚಿಂತನೆಗಳನ್ನು ಮುಂದಿನ ತಲೆಮಾರುಗಳ ವರೆಗೂ ಸಮುದಾಯ ಅಳವಡಿಸಿಕೊಂಡು ನಿಜವಾದ ಗುರಿಮುಟ್ಟುವಲ್ಲಿ  ಸಫಲಗೊಳ್ಳಬೇಕಿದೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯು ಅಲ್ಲಾಹನು ನಮಗೆಲ್ಲರಿಗೂ ದಯಪಾಲಿಸಲಿ ಅವರನ್ನು ಅತ್ಯುನ್ನತ ಸ್ವರ್ಗದಲ್ಲಿ ಸೇರಿಸಲಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.  

Join Whatsapp