ತ್ರಿವಳಿ ತಲಾಖ್ ರದ್ದುಗೊಳಿಸಿದ್ದೇವೆ ಎನ್ನುವ ಪಕ್ಷ ನನ್ನ ಪತಿಯಲ್ಲಿ ನನಗೆ ವಿಚ್ಛೇಧನೆ ನೀಡಲು ಹೇಳುತ್ತಿದೆ : ಸುಜಾತಾ ಮೊಂಡಲ್ ಖಾನ್

Prasthutha|

ಕೊಲ್ಕತಾ : ತ್ರಿವಳಿ ತಲಾಖ್ ರದ್ದುಗೊಳಿಸಿದ್ದೇವೆ ಎನ್ನುವ ಪಕ್ಷ ನನ್ನ ಪತಿಯಲ್ಲಿ ನನಗೆ ವಿಚ್ಛೇಧನೆ ಕೊಡಲು ಹೇಳುತ್ತಿದೆ ಎಂದು ಬಿಜೆಪಿ ತೊರೆದು ಟಿಎಂಸಿ ಸೇರಿದ ಸುಜಾತಾ ಮೊಂಡಲ್ ಖಾನ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ತೊರೆದು ಟಿಎಂಸಿ ಸೇರಿದ ತಮ್ಮ ಪತ್ನಿ ಸುಜಾತಾ ಮೊಂಡಲ್ ಖಾನ್ ಗೆ ಡೈವೊರ್ಸ್ ನೋಟಿಸ್ ಕಳುಹಿಸುವುದಾಗಿ ಹೇಳಿದ್ದ ಸಂಸದ ಸೌಮಿತ್ರ ಖಾನ್ ಹೇಳಿಕೆಗೆ, ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

ಸೌಮಿತ್ರ ಖಾನ್ ಮತ್ತು ಸುಜಾತಾ ಮೊಂಡಲ್ ಅವರ 10 ವರ್ಷದ ತಮ್ಮ ಸಂಬಂಧವನ್ನು ರಾಜಕೀಯ ಕಾರಣಗಳಿಗಾಗಿ ಮುರಿದುಕೊಂಡಿದ್ದಾರೆ. 34ರ ಹರೆಯದ ಸುಜಾತಾ ಮೊಂಡಲ್ ಬಿಜೆಪಿ ತೊರೆದು, ಟಿಎಂಸಿ ಸೇರಿದ್ದಾರೆ.

ಸೌಮಿತ್ರ ಖಾನ್ ಬಿಜೆಪಿ ಸಂಸದರಾಗುವಲ್ಲಿ ಸುಜಾತಾ ಮೊಂಡಲ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ರಿಮಿನಲ್ ಕೇಸ್ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ತೆರಳಲು ಕೋರ್ಟ್ ಸೌಮಿತ್ರ ಖಾನ್ ಗೆ ನಿಷೇಧ ಹೇರಿತ್ತು. ಈ ವೇಳೆ ಸುಜಾತಾ ಮೊಂಡಲ್ ತಾನೇ ಮುಂದೆ ನಿಂತು ಚುನಾವಣಾ ಪ್ರಚಾರ ಮಾಡಿ, ಸೌಮಿತ್ರ ಖಾನ್ ರನ್ನು ಗೆಲ್ಲಿಸಿದ್ದರು.  

Join Whatsapp