ಕಾವಳಕಟ್ಟೆ: ಬಿಜೆಪಿ ಕಾರ್ಯಕರ್ತನಿಂದ ರಾಷ್ಟ್ರ ಧ್ವಜಕ್ಕೆ ಅವಮಾನ

Prasthutha|

ಕಾವಳಕಟ್ಟೆ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಹರ್ ಘರ್ ತಿರಂಗ ಅಭಿಯಾನದ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜ ಹಾರಿಸಲು ಹೋಗಿ ಬಿಜೆಪಿ ಕಾರ್ಯಕರ್ತ ಮಾಯಿಲಪ್ಪ ಎಂಬಾತ ತನ್ನ ಅಂಗಡಿಯಲ್ಲಿ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿದ ಘಟನೆ ಕಾವಳ ಕಟ್ಟೆಯಲ್ಲಿ ನಡೆದಿದೆ. ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

- Advertisement -

ಮಾಯಿಲಪ್ಪ ಕಳೆದ ಬಾರಿ ಗ್ರಾಮ ಪಂಚಾಯತ್ ಚುನಾವಣೆಯುಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದನು. ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ದೇಶಾದ್ಯಂತ ಜನರು ತಮ್ಮ ಮನೆ, ಅಂಗಡಿಗಳಲ್ಲಿ ದೇಶದ ಧ್ವಜವನ್ನು ಕಟ್ಟಿ ಬೆಂಬಲಿಸುತ್ತಿದ್ದರೆ, ಕೆಲವರು ರಾಷ್ಟ್ರಧ್ವಜಕ್ಕೆ ಅವಮಾನಿಸುತ್ತಿರುವುದು ಕಂಡುಬರುತ್ತಿದೆ. ಕಾವಳ ಕಟ್ಟೆಯ ಬಿಜೆಪಿ ಕಾರ್ಯಕರ್ತ ರಾಷ್ಟ್ರಧ್ವಜವನ್ನು ತಲೆ ಕೆಳಗೆ ಮಾಡಿ ಅವಮಾನ ಮಾಡಿದ ಘಟನೆ ಅವುಗಳಲ್ಲಿ ಒಂದಾಗಿದೆ.


ಈ ಬಗ್ಗೆ SDPI ಕಾವಳ ಮುಡೂರು ಗ್ರಾಮ ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದು, ಪೋಲಿಸ್ ಇಲಾಖೆ ಇವರ ಮೇಲೆ ತಕ್ಷಣ ಕೇಸು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದೆ..

Join Whatsapp