ಜಾರ್ಖಂಡ್‌: ಬಜರಂಗ ದಳ ಕಾರ್ಯಕರ್ತನ ಹತ್ಯೆ

Prasthutha|

ಚಕ್ರಧಾರ್‌ಪುರ‌: ಜಾರ್ಖಂಡ್ ನಲ್ಲಿ ಬಜರಂಗದಳ ಕಾರ್ಯಕರ್ತನನ್ನು ಹತ್ಯೆಗೈಯ್ಯಲಾಗಿದೆ.

- Advertisement -

ಜಾರ್ಖಂಡ್‌ನ ಪಶ್ಚಿಮ ಸಂಘ್‌ಭುಮ್ ಜಿಲ್ಲೆಯ ಚಕ್ರಧಾರ್‌ಪುರ ಪಟ್ಟಣದಲ್ಲಿ ಕಚ್ಚಾ ಬಾಂಬ್ ಎಸೆದು ಬಜರಂಗದಳ ಕಾರ್ಯಕರ್ತನಾದ ಕಮಲ್‌ ದೇವಗಿರಿ ಎಂಬ ಯುವಕನನ್ನು ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೈಕ್‌ನಲ್ಲಿ ಬಂದ ಇಬ್ಬರು ಕಮಲ್‌ ಮೇಲೆ ಕಚ್ಚಾ ಬಾಂಬ್ ಎಸೆದಿದ್ದು, ಯುವಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಇಬ್ಬರು ಆರೋಪಿಗಳನ್ನು ಇನ್ನಷ್ಟೇ ಗುರುತಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಕೃತ್ಯವನ್ನು ಖಂಡಿಸಿ ಘಟನೆ ನಡೆದ ಸ್ಥಳದಲ್ಲಿ ನೂರಾರು ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಸ್ಥಾಪಿಸುವ ಸಲುವಾಗಿ  ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯನ್ನು (ಸಿಆರ್‌ಪಿಎಫ್‌) ನಿಯೋಜಿಸಲಾಗಿತ್ತು.

Join Whatsapp