ಜೆಡಿಎಸ್ ನಿಂದ ಮನೆಮನೆಗೆ ನಾಡಧ್ವಜ ಅಭಿಯಾನ

Prasthutha|

ಬೆಂಗಳೂರು: ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಮಾದರಿಯಲ್ಲಿಯೇ  ನವೆಂಬರ್ 1, ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮನೆಮನೆಗೆ ನಾಡಧ್ವಜ ಎಂಬ ಅಭಿಯಾನವನ್ನು ಜೆಡಿಎಸ್ ಆರಂಭಿಸಲಿದೆ.

- Advertisement -

ಅಭಿಯಾನದ ಹಿನ್ನಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಹೆಚ್.ಡಿ. ಕುಮಾರಸ್ವಾಮಿ, ಸೇರಿದಂತೆ ಪಕ್ಷದ ನಾಯಕರು ಜೆಡಿಎಸ್ ಕಚೇರಿಯಲ್ಲಿ, ಸಭೆ ಹಮ್ಮಿಕೊಂಡಿದ್ದಾರೆ.

ಜೆಡಿಎಸ್, ಮನೆಮನೆಗೆ ನಾಡಧ್ವಜ ಅಭಿಯಾನದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಸಿದ್ಧತೆ ರೂಪಿಸಿಕೊಂಡಿದ್ದು, ರಾಷ್ಟ್ರಪ್ರೇಮದ ಜತೆಗೆ ರಾಜ್ಯ ಪ್ರೇಮ ಎನ್ನುವ ಸಂದೇಶವನ್ನು ರವಾನಿಸಲು ಪಕ್ಷ ಮುಂದಾಗಿದೆ ಎನ್ನಲಾಗುತ್ತಿದೆ.

- Advertisement -

ಇದೀಗ ನವೆಂಬರ್ 1 ರಿಂದ 15 ದಿನಗಳ ಕಾಲ ರಾಜ್ಯಾದ್ಯಂತ ಮನೆಯಲ್ಲಿ ಕನ್ನಡ ಬಾವುಟ ಹಾರಿಸಲು  ಜೆಡಿಎಸ್ ಸಜ್ಜಾಗಿದೆ.

Join Whatsapp