ಪವಿತ್ರ ರಂಝಾನ್ ನಲ್ಲಿ ಸಂಘಪರಿವಾರದಿಂದ ಮುಸ್ಲಿಮರ ಮೇಲೆ ದಾಳಿ: ಮೆಹಬೂಬಾ ಮುಫ್ತಿ ಕಿಡಿ

Prasthutha|

ಜಮ್ಮು: ಪವಿತ್ರ ರಂಝಾನ್ ತಿಂಗಳಲ್ಲಿ ದೇಶದ ಮುಸ್ಲಿಮರ ಮೇಲೆ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಅಮಾನುಷ ದಾಳಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕಿಡಿಕಾರಿದ್ದಾರೆ.

- Advertisement -

ಕಾಶ್ಮೀರದ ಜನತೆಗೆ ತನ್ನ ಈದ್ ಸಂದೇಶ ಮತ್ತು ಶುಭಾಶಯ ಸಲ್ಲಿಸಿದ ಬಳಿಕ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ದೇಶಾದ್ಯಂತ ಬಿಜೆಪಿ ಸರ್ಕಾರ ಮತ್ತು ಸಂಘಪರಿವಾರ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಆಕ್ರಮಣವನ್ನು ಮಾಡುತ್ತಿರುವಾಗ ಈ ವರ್ಷ ಮುಸ್ಲಿಮರು ಪವಿತ್ರ ರಂಝಾನ್ ತಿಂಗಳಲ್ಲಿ ನಿಜವಾಗಿಯೂ ಸ್ಥೈರ್ಯ ಮತ್ತು ಧೈರ್ಯದಿಂದ ಜೀವಿಸಿ ತೋರಿಸಿದ್ದಾರೆ ಎಂದು ಮುಫ್ತಿ ತಿಳಿಸಿದ್ದಾರೆ.

- Advertisement -

ಬುಲ್ಡೋಝರ್ ಕಾರ್ಯಾಚರಣೆ ರಾಜ್ಯ ಸರ್ಕಾರದ ಭಯೋತ್ಪಾದನೆಯ ಸಂಕೇತವಾಗಿದೆ, ಸರ್ಕಾರ ಬಿಚ್ಚಿಟ್ಟ ದ್ವೇಷದ ಪ್ರವೃತ್ತಿ ಮತ್ತು ಹಿಂದೂ ರಾಷ್ಟ್ರದ ಮಾರ್ಗಸೂಚಿ ಬಿಜೆಪಿಯ ಆಯ್ಕೆಯ ಪ್ರತಿ ರೂಪವೂ ವಿನಾಶಕಾರಿಯಾಗುತ್ತಿರುವಂತೆ ತೋರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಬಂಧಿತ ಪತ್ರಕರ್ತರು, ವಿದ್ಯಾರ್ಥಿಗಳು, ಮಾನವ ಹಕ್ಕುಗಳು ಮತ್ತು ರಾಜಕೀಯ ಕಾರ್ಯಕರ್ತರಿಗೆ ಮುಫ್ತಿ ಅವರು ತಮ್ಮ ಬೆಂಬಲ ಸೂಚಿಸಿದ್ದಾರೆ.

Join Whatsapp