ರಾಜ್ಯದಲ್ಲಿ ಇನ್ನೂ 9 ವರ್ಷ ಕಾಂಗ್ರೆಸ್‌‌ನದ್ದೇ ಅಧಿಕಾರ: ಡಿಸಿಎಂ

Prasthutha|

ರಾಯಚೂರು: ನೀವು ಕೊಟ್ಟ ಶಕ್ತಿಯಿಂದಲೇ ನಾವು ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಾಯಿತು. ರಾಜ್ಯದಲ್ಲಿ ಇನ್ನೂ ಒಂಬತ್ತು ವರ್ಷ ಕಾಂಗ್ರೆಸ್‌‌ನದ್ದೇ ಅಧಿಕಾರ ಇರುತ್ತದೆ. ಬಿಜೆಪಿ, ಜೆಡಿಎಸ್‌ ಮರೆತು ಬಿಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

- Advertisement -

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ಗಣೇಕಲ್‌ ಲಿಂಕ್‌ ಕಾಲುವೆ ಯೋಜನೆ, ವಿವಿಧ ಇಲಾಖೆಗಳ 501 ಕೋ. ರೂ. ವೆಚ್ಚದ 54 ಕಾಮಗಾರಿಗಳಿಗೆ ಶಂಕು ಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ್‌, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಭೋಸರಾಜು, ಪರಿಸರದ ಶಾಸಕರು ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.

- Advertisement -

Join Whatsapp