ನಾನು ಮನೆಮನೆಗೆ ಹೋಗಿ ಬಿಜೆಪಿ ಮಾನ ಮರ್ಯಾದಿ ಕಳೀತೀನಿ: ಪ್ರಮೋದ್ ಮುತಾಲಿಕ್

Prasthutha|

ಗಂಗೊಳ್ಳಿ: ಕಲಬುರುಗಿ ಗಣೇಶೋತ್ಸವಕ್ಕೆ ತನಗೆ ನಿರ್ಬಂಧ ಹೇರಿರುವ ಆಡಳಿತರೂಢ ಬಿಜೆಪಿ ಪಕ್ಷದ ನಡೆ ಬಗ್ಗೆ ಆಕ್ರೋಶಗೊಂಡ ಪ್ರಮೋದ್ ಮುತಾಲಿಕ್, ನಾನು ಮನೆಮನೆಗೆ ಹೋಗಿ ಬಿಜೆಪಿ ಮರ್ಯಾದಿ ಕಳೀತೀನಿ ಎಂದು ಹೇಳಿದ್ದಾರೆ.

- Advertisement -

ವಿವಾದಿತ ವ್ಯಕ್ತಿಯೆಂದು ನನಗೆ ಆಗಾಗ ನಿಷೇಧ ಹೇರುವುದು ಬಿಜೆಪಿಗೆ ಶೋಬೆ ತರುವುದಿಲ್ಲ ಎಂದು ಹೇಳಿದ ಮುತಾಲಿಕ್, ನನ್ನನ್ನು ತಡೆಯುವುದು ಜಿಲ್ಲಾಧಿಕಾರಿಯ ಆದೇಶವಲ್ಲ, ಸರ್ಕಾರದ ಆದೇಶ. ಸರ್ಕಾರ ಅಂದರೆ ಬಿಜೆಪಿ , ಹಾಗಾಗಿ ತನಗೆ ಪದೇಪದೇ ನಿರ್ಬಂಧ ಹೇರಿ ನಾಟಕ ಮಾಡ್ತಾ ಇದ್ದೀರಾ ಎಂದು ಮುತಾಲಿಕ್ ಪ್ರಶ್ನಿಸಿದ್ದು, ನನ್ನನ್ನು ನಿಷೇಧ ಮಾಡುವ ಬಿಜೆಪಿಯ ಮಾನ ಮರ್ಯಾದೆ, ಮನೆ ಮನೆಗೆ ಬೀದಿ ಬೀದಿಗೆ ಹೋಗಿ ತೆಗಿತೀನಿ ಎಂದು ಹೇಳಿದರು.

ಹಿಂದೂಗಳ ಕೊಲೆಯಾಗುವಾಗ ಸರ್ಕಾರ ಸಂಘಟನೆಗಳಿಗೆ ಬಲ ತುಂಬಬೇಕೇ ಹೊರತು ಮುಸ್ಲಿಮರನ್ನು ನನ್ನ ವಿರುದ್ಧ ಎತ್ತಿಕಟ್ಟೋದಲ್ಲ. ಹೀಗೇ ನಿಷೇಧ ನಾಟಕ ಮುಂದುವರಿಸಿದರೆ ಸರ್ಕಾರಕ್ಕೆ ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿಗಳ ಮೂಲಕವೇ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತೇನೆ ಎಂದು ಗುಡುಗಿದರು

Join Whatsapp