ಅಂಗಾಂಗಗಳನ್ನು ಮಾರಿ ಜೀವನ ಮಾಡ್ತೇನೆ; ಮುಸ್ಲಿಮರಿಗೆ ಬಾಡಿಗೆ ಕೊಡಲ್ಲ ಎಂದ ಮನೆ ಮಾಲೀಕ: ಇದು ಪಾಗಲ್ ದಂಗಲ್ ಎಂದ ನೆಟ್ಟಿಗರು

Prasthutha|

ಬೆಂಗಳೂರು: ರಾಜ್ಯಾದ್ಯಂತ ಮುಸ್ಲಿಮರೊಂದಿಗಿನ ವ್ಯವಹಾರ ಸಂಬಂಧಿತವಾಗಿ ಹಲವಾರು ಅಭಿಯಾನಗಳು ಹುಟ್ಟಿಕೊಳ್ಳುತ್ತಿದ್ದು ಈ ಹುಚ್ಚಾಟಕ್ಕೆ ಮತ್ತೊಂದು ಘಟನೆ ಸೇರಿಕೊಂಡಿದೆ.

- Advertisement -

ಮನೆ ಖಾಲಿಯಿದೆ ಆದರೆ ಹಿಂದೂಗಳಿಗೆ ಮಾತ್ರ ತನ್ನ ಮನೆ ಬಾಡಿಗೆಗೆ ನೀಡುತ್ತೇನೆ ಎಂದು ಮನೆಯ ಬಾಗಿಲಿಗೆ ಕಾರ್ಡೊಂದು ತೂಗಿ ಹಾಕಿದ್ದು ಅದರಲ್ಲಿ ಕೆಲವೊಂದು ಅತಿರೇಕ ಬರಹಗಳನ್ನು ಸೇರಿಸಿ ಮನೆಮಾಲಿಕ ದಯಾನಂದ ಅವರು ಸಾಮಾಜಿಕ ವಲಯಗಳಲ್ಲಿ ಅಪಹಾಸ್ಯಕ್ಕೀಡಾಗಿದ್ದಾರೆ.

“ ಅನಿವಾರ್ಯವಾದರೆ ಶರೀರದ ಅಂಗಾಂಗಗಳನ್ನು ಮಾರಿಕೊಂಡು ಜೀವನ ಮಾಡಬಹುದು, ಆದರೆ ಮುಸಲ್ಮಾನರ ಬಾಡಿಗೆ ದುಡ್ಡಿನಿಂದಲ್ಲ. ಮನೆ ಖಾಲಿಯಿದೆ ಹಿಂದೂಗಳಿಗೆ ಮಾತ್ರ” ಎಂದು ತನ್ನ ಮನೆ ಮುಂಬಾಗಿಲಿನ ಗೇಟಿಗೆ ಬೋರ್ಡೊಂದು ತೂಗಿಹಾಕಿದ್ದು ಜೊತೆಗೆ ಹೆಸರು ಮತ್ತು ನಂಬರನ್ನೂ ಲಗತ್ತಿಸಿದ್ದಾರೆ.

- Advertisement -

ಈ ಚಿತ್ರ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದು ಧರ್ಮ ದಂಗಲಿನ ದುರವಸ್ಥೆ, ಇಂತಹ ಹುಚ್ಚು ಹುಚ್ಚಾದ ಅಭಿಯಾನಗಳು ಎಲ್ಲಿಗೆ ತಲುಪುತ್ತೋ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

Join Whatsapp