ಹಿಮಾಚಲ ಪ್ರದೇಶ: ದರ್ಗಾ ಧ್ವಂಸಗೊಳಿಸಿದ ಸಂಘಪರಿವಾರದ ಕಾರ್ಯಕರ್ತರು

Prasthutha|

ನವದೆಹಲಿ: ಸಂಘಪರಿವಾರದ ಕಾರ್ಯಕರ್ತರು ಹಿಮಾಚಲ ಪ್ರದೇಶದಲ್ಲಿ ದರ್ಗಾವೊಂದನ್ನು ಒಡೆದು ಧ್ವಂಸಗೊಳಿಸಿದ್ದು, ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಮೂವರು ಸಂಘಪರಿವಾರದ ಕಾರ್ಯಕರ್ತರು ಹಾಡುಗಳನ್ನು ಹಾಕಿಕೊಂಡು ಬೃಹತ್ ಗಾತ್ರದ ಸುತ್ತಿಗೆಯಿಂದ ಒಡೆದು ದರ್ಗಾವನ್ನು ಧ್ವಂಸಗೊಳಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಸಂಘಪರಿವಾರದ ಕಾರ್ಯಕರ್ತ ಹರೀಶ್ ರಾಮ್ಕಾಲಿ ಎಂಬಾತನ ನೇತೃತ್ವದಲ್ಲಿ ಈ ದರ್ಗಾವನ್ನು ಧ್ವಂಸಗೈಯ್ಯಲಾಗಿದೆ ಎಂದು ಹೇಳಲಾಗಿದ್ದು, ಈ ಹಿಂದೆಯೂ ಕೂಡ ಈತ ಹರ್ಯಾಣದಲ್ಲಿ ಹಲವಾರು ದರ್ಗಾಗಳನ್ನು ಧ್ವಂಸ ನಡೆಸಿದ್ದಾನೆ.

- Advertisement -

ಸದ್ಯ ಹಿಮಾಚಲದಲ್ಲಿ ದರ್ಗಾವನ್ನು ಒಡೆದು ಧ್ವಂಸ ಮಾಡುತ್ತಿರುವ ವೀಡಿಯೋವನ್ನು ಫೇಸ್ ಬುಕ್ ನಲ್ಲಿ ಹಂಚಲಾಗಿದೆ.

Join Whatsapp