ಬಿದ್ದು ಸಿಕ್ಕಿದ ಚಿನ್ನದ ಬಳೆ ಹಿಂದುರಿಗಿಸಿ ಪ್ರಾಮಾಣಿಕತೆ ಮೆರೆದ ಹೋಟೆಲ್ ಮಾಲೀಕ

Prasthutha|

ಮಡಿಕೇರಿ: ಬಿದ್ದು ಸಿಕ್ಕಿದ ಚಿನ್ನದ ಬಳೆ ಹಿಂದಿರುಗಿಸಿದ ಹೋಟೆಲ್ ಮಾಲೀಕ ಜಯಂತ್ ಪೂಜಾರಿ ಪ್ರಾಮಾಣಿಕತೆ ಮೆರೆದ್ದಾರೆ.

- Advertisement -

ಉಡುಪಿ ಗಾರ್ಡೇನ್ ಹೋಟೆಲ್‌ಗೆ ಎರಡು ದಿನಗಳ ಹಿಂದೆ ದಂಪತಿಗಳು ಉಪಹಾರಕ್ಕೆ ಬಂದಿದ್ದರು, ಉಪಹಾರ ಮುಗಿಸಿ ತೆರಳುವ ಸಮಯದಲ್ಲಿ ಅವರಿಗರಿವಿಲ್ಲದೆ ಅವರ ಚಿನ್ನದ ಬಳೆ ಬಿದ್ದು ಹೋಗಿದ್ದು ಬಳೆ ಹೋಟೆಲ್ ಮಾಲೀಕ ಜಯಂತ್ ಪೂಜಾರಿಯವರಿಗೆ ಸಿಕ್ಕಿದೆ. ಯಾರದೆಂದು ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿ ಅದು ಅಲ್ಲಿಗೆ ಉಪಹಾರಕ್ಕೆ ಬಂದಿದ್ದ ದಂಪತಿಗಳೆಂದು ಅರಿತುಕೊಂಡ ಜಯಂತ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು, ಪರಿಣಾಮ ಇಂದು ದಂಪತಿಗಳು ಹೋಟೆಲ್ ಗೆ ಆಗಮಿಸಿ ಬಳೆಯನ್ನು ಪಡೆದು ಮಾಲೀಕ ಜಯಂತ್ ಪೂಜಾರಿ ಗೆ ಧನ್ಯವಾದ ತಿಳಿಸದರು.

ಸದ್ಯ ಪ್ರಾಮಾಣಿಕತೆಗೆ ಮೆರೆದ ಜಯಂತ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Join Whatsapp