BJP ವಿರುದ್ಧ ತಿರುಗಿ ಬಿದ್ದ ಹಿಂದುತ್ವ ಕಾರ್ಯಕರ್ತರು;ನೂತನ ಪಕ್ಷ HJP ಅಸ್ತಿತ್ವಕ್ಕೆ

Prasthutha|

ಬೆಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಬಿಜೆಪಿ ವಿರುದ್ಧ ತಿರುಗಿ ಬಿದ್ದಿರುವ ಹಿಂದುತ್ವ ಕಾರ್ಯಕರ್ತರು ಹಿಂದೂಸ್ಥಾನ್ ಜನತಾ ಪಾರ್ಟಿ (HJP) ಎಂಬ ಹೊಸ ಪಕ್ಷವೊಂದನ್ನು ಕಟ್ಟಿದ್ದಾರೆ.

- Advertisement -

ಪಕ್ಷದ ರಾಜ್ಯಾಧ್ಯಕ್ಷ ವಿನಾಯಕ ಮಾಳದಕರ್ ನೇತೃತ್ವದಲ್ಲಿ ರಾಜಾಜಿನಗರದ ಶರಣ ಸೇವಾ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಹಿಂದೂಸ್ಥಾನ್ ಜನತಾ ಪಾರ್ಟಿ ಎಂಬ ನೂತನ ಪಕ್ಷ ಇಂದು ಅಸ್ತಿತ್ವಕ್ಕೆ ಬಂತು. ನೂತನ ನಾಯಕರು ಸೇರಿ ಪಕ್ಷದ ಲೋಗೋ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿಂದೂಸ್ತಾನ್ ಜನತಾ ಪಾರ್ಟಿ ಕಾರ್ಯದರ್ಶಿ ಹರೀಶ್, ಇವತ್ತು ಬರಬೇಕಿದ್ದ ಕೆಲವು ಅಥಿತಿಗಳು ಅಡಚಣೆ ಮಾಡಿದ್ದಾರೆ. ಬಿಜೆಪಿ ವಿರುದ್ಧ ಹಿಂದೂಗಳು ತಿರುಗಿಬಿದ್ದಿದ್ದಾರೆ. ಹಿಂದುತ್ವ ವಿಚಾರದಲ್ಲಿ ಕಾಂಗ್ರೆಸ್ ಜೆಡಿಎಸ್ ನಾಯಕರು ಯಾರೂ ಒಳ್ಳೆಯವರಲ್ಲ ಎಂದು ಕಿಡಿಕಾರಿದರು.

Join Whatsapp