ಮಸೀದಿಯ ಆವರಣಕ್ಕೆ ನುಗ್ಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಹಿಂದುತ್ವವಾದಿಗಳು: ವೀಡಿಯೋ ವೈರಲ್

Prasthutha|

ಹೈದರಾಬಾದ್: ಹಿಂದುತ್ವವಾದಿಗಳ ಗುಂಪೊಂದು ಕುತುಬ್ ಶಾಹಿ ಮಸೀದಿ ಆವರಣಕ್ಕೆ ನುಗ್ಗಿ, ಮಸೀದಿಯಲ್ಲಿ ಬಲವಂತವಾಗಿ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದ ಘಟನೆ ಜಿಲ್ಲೆಯ ರಾಯದುರ್ಗಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವಂತಹ ಮಲ್ಕಂ ಚೆರುವು ಪ್ರದೇಶದಲ್ಲಿ ನಡೆದಿದೆ.

- Advertisement -

ಭಾನುವಾರ ಬೆಳಿಗ್ಗೆ, ಹಿಂದುತ್ವವಾದಿಗಳ ಗುಂಪೊಂದು ಮಸೀದಿಯ ಆವರಣಕ್ಕೆ ಅತಿಕ್ರಮಿಸಿ, ಮಸೀದಿಯ ಹೊರಗಿನ ಗೋಡೆಯನ್ನು ಒಡೆದಿದ್ದಲ್ಲದೆ ಮಸೀದಿಯೊಳಗೆ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಮಸೀದಿಯ ನಿರ್ವಹಣಾ ಸಮಿತಿಯ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ ಮತ್ತು ವಕ್ಫ್ ಮಂಡಳಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

- Advertisement -

ಹಿಂದುತ್ವವಾದಿಗಳು ಮಸೀದಿಗೆ ಅತಿಕ್ರಮಣ ಪ್ರವೇಶ ಮಾಡುವ ದೃಶ್ಯಾವಳಿಗಳು ಸೆರೆಯಾಗಿದ್ದು, ಅದರ ವೀಡಿಯೋ ವೈರಲ್ ಆಗುತ್ತಿದೆ. ಸಮಾಜದ ಸ್ವಾಸ್ಥ್ಯ ಕೆಡವಲು ಹಿಂದುತ್ವವಾದಿಗಳು ಈ ರೀತಿ ಅಕ್ರಮ ಮಾಡುತ್ತಿದ್ದಾರೆ ಎಂದು ಮಸೀದಿಯ ನಿರ್ವಹಣಾ ಸಮಿತಿಯ ಅಧಿಕಾರಿಗಳು ಆರೋಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Join Whatsapp