ತನ್ನ ಮನೆಯ ಮೇಲೆ ಬಾಂಬ್ ಎಸೆದು ಪೊಲೀಸರಿಗೆ ದೂರು ನೀಡಿದ್ದ RSS ಅಂಗಸಂಸ್ಥೆ ಹಿಂದೂ ಮುನ್ನಣಿಯ ನಾಯಕನ ಬಂಧನ

Prasthutha|

ಚೆನ್ನೈ: ತನ್ನ ಮನೆಯ ಮೇಲೆ ಬಾಂಬ್ ಎಸೆದು ಪೊಲೀಸರಿಗೆ ಸುಳ್ಳು ದೂರು ನೀಡಿದ್ದ ಆರೆಸ್ಸೆಸ್‌‌‌‌ನ ಅಂಗಸಂಸ್ಥೆಯಾದ ‘ಹಿಂದೂ ಮುನ್ನಣಿ’ ಯ ನಾಯಕ ಬಂಧನಕ್ಕೊಳಗಾಗಿದ್ದಾನೆ.

- Advertisement -

ಆರೆಸ್ಸೆಸ್ ಅಂಗಸಂಸ್ಥೆಯಾದ ಹಿಂದೂ ಮುನ್ನಣಿ ಸಂಘಟನೆಯ ಕುಂಭಕೋಣಂ ನಗರದ ಕಾರ್ಯದರ್ಶಿಯಾದ ಸಕ್ಕರೆಪಾಣಿ (40) ಬಾಂಬ್ ಎಸೆದು ತಮಿಳುನಾಡು ಪೊಲೀಸರಿಂದ ಬಂಧನಕ್ಕೊಳಗಾದ ಆರೋಪಿಯಾಗಿದ್ದಾನೆ.

ಅಪರಿಚಿತ ದುಷ್ಕರ್ಮಿಗಳು ತಮ್ಮ ಮನೆ ಮುಂದೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಎಂದು ದುಷ್ಕರ್ಮಿ ಕುಂಭಕೋಣಂ ಪೂರ್ವ ಪೊಲೀಸ್ ಠಾಣೆಗೆ ಕರೆ ಮಾಡಿದ್ದನು.

- Advertisement -

ಇದೇ ವೇಳೆ ಉತ್ತರ ತಂಜಾವೂರಿನ ಬಿಜೆಪಿ ಅಧ್ಯಕ್ಷ ಸತೀಶ್ ಕುಮಾರ್ ಮತ್ತು ಇತರ ಹಿಂದೂ ಮುನ್ನಣಿ ಪದಾಧಿಕಾರಿಗಳು ಕೂಡಾ ಸಕ್ಕರೆಪಾಣಿ ಮನೆಗೆ ಭೇಟಿ ನೀಡಿ, ಪೊಲೀಸರೊಂದಿಗೆ ಸಂವಾದ ನಡೆಸಿ ತಕ್ಷಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು.

Join Whatsapp