ಸಿಎಎ ಕಾಯ್ದೆ ಹಿಂಪಡೆದು ಪ್ರಧಾನಿ ಕ್ಷಮೆಯಾಚಿಸಲಿ: ಸಂಸದ ಡ್ಯಾನಿಶ್ ಅಲಿ ಆಗ್ರಹ

Prasthutha|

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಮತ್ತು ಶಾಂತಿಯುತವಾಗಿ ಸಿಎಎ ಪ್ರತಿಭಟನೆಯ ನಡೆಸುತ್ತಿದ್ದವರ ಮೇಲೆ ಕಾನೂನು ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕು ಎಂದು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಒತ್ತಾಯಿಸಿದ್ದಾರೆ.

- Advertisement -

ಲೋಕಸಭೆ ಕಲಾಪದ ಶೂನ್ಯ ವೇಳೆಯ ಚರ್ಚೆಯಲ್ಲಿ ಬಿಎಸ್ಪಿ ಮುಖಂಡ ಡ್ಯಾನಿಶ್ ಅಲಿ ಅವರು ಸಿಎಎ ಕಾಯ್ದೆಯನ್ನು ಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಮಾತ್ರವಲ್ಲ ಯುಎಪಿಎ ಕಾಯ್ದೆಯಲ್ಲಿ ಬಂಧಿತರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಮತ್ತು ಪ್ರತಿಭಟನಾಕಾರರನ್ನು ಬಂಧಿಸಿದ್ದಕ್ಕಾಗಿಇ ಪ್ರಧಾನಿ ಕ್ಷಮೆಯಾಚಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

Join Whatsapp