‘ಪೈಲಟ್ ನಂಬಿಕೆದ್ರೋಹಿ’ ಹೇಳಿಕೆ ಅನಿರೀಕ್ಷಿತ ಎಂದ ಜೈರಾಮ್ ರಮೇಶ್!

Prasthutha|

ಹೊಸದಿಲ್ಲಿ:  ಸಚಿನ್ ಪೈಲಟ್‌ಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ “ಗದ್ದರ್” (ನಂಬಿಕೆದ್ರೋಹಿ) ಎಂಬ ಪದವನ್ನು ಬಳಸಿದ್ದು ಅನಿರೀಕ್ಷಿತ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಶುಕ್ರವಾರ ಹೇಳಿದ್ದಾರೆ.

- Advertisement -

ಭಾರತ್ ಜೋಡೋ ಯಾತ್ರೆಯಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಇಬ್ಬರ ನಾಯಕತ್ವವೂ ಅಗತ್ಯವಿದೆ ಮತ್ತು ರಾಜಸ್ಥಾನ ಘಟಕದಲ್ಲಿನ ಬಿಕ್ಕಟ್ಟನ್ನು ಸಂಘಟನೆಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ವ್ಯಕ್ತಿಗಳ ಹಿತಾಸಕ್ತಿಗನುಗುಣವಲ್ಲದೆ ಪರಿಹರಿಸಲಾಗುವುದು ಎಂದು ಹೇಳಿದರು.

ಗುರುವಾರ ಟಿವಿ ಸಂದರ್ಶನವೊಂದರಲ್ಲಿ, ಪೈಲಟ್ ಒಬ್ಬ ‘ಗದ್ದರ್’ ಆಗಿರುವುದರಿಂದ ಅವರನ್ನು ರಾಜಸ್ಥಾನ ಸಿಎಂ ಆಗಿ ಬದಲಾಯಿಸಲು ಸಾಧ್ಯವಿಲ್ಲ. 2020 ರಲ್ಲಿ ಪೈಲಟ್ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು, ರಾಜಸ್ಥಾನದಲ್ಲಿ ಪಕ್ಷದ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದರು ಎಂದು ಗೆಹ್ಲೋಟ್ ಹೇಳಿದ್ದರು.

Join Whatsapp