ಮಗುವನ್ನು ಕೊಂದು ಬೋರ್ ವೆಲ್ ಗೆ ಹಾಕಿದ ತಂದೆ: ಪತ್ನಿಯ ಮೇಲೆ ಶಂಕೆಯಿಂದ ದುಷ್ಕೃತ್ಯ ನಡೆಸಿದ ಪತಿಯ ಬಂಧನ

Prasthutha|

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಬಾಗದ ಆಲಖನೂರು ಎಂಬಲ್ಲಿ ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದ ಮಗು ಬೋರ್ ವೆಲ್ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಈ ಮಧ್ಯೆ ಮಗುವಿನ ಸಾವಿನ ಕುರಿತು ಪೊಲೀಸರಿಗೆ ಸಂಶಯ ವ್ಯಕ್ತವಾಗಿ, ಮಗುವಿನ ತಂದೆಯನ್ನು ವಿಚಾರಣೆಗೊಳಪಡಿಸಿದಾಗ ಕೊಲೆ ನಡೆಸಿದ ನಂತರ ಬೋರ್ ವೆಲ್ ಎಸೆದಿರುವುದು ತನಿಖೆಯಿಂದ ಬಹಿರಂಗವಾಗಿದೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಪೊಲೀಸರು, ಕೊಲೆಯಾದ ಮಗುವಿನ ತಂದೆ ಸಿದ್ದಪ್ಪ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆತ ತನ್ನ ಪತ್ನಿಯ ಮೇಲಿನ ಶಂಕೆಯಿಂದ ಈ ದುಷ್ಕ್ರತ್ಯ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅನೈತಿಕ ಸಂಬಂಧದಿಂದ ಹುಟ್ಟಿದ ನೆಲೆಯಲ್ಲಿ ಮಗುವನ್ನು ಕೊಲೆಮಾಡಿದ ನಂತರ ಯಾರಿಗೂ ಸಂಶಯ ಬಾರದಿರಲು ಈ ರೀತಿ ಮಾಡಿರುವುದಾಗಿ ಪೊಲೀಸರ ಬಳಿ ತಿಳಿಸಿದ್ದಾನೆ.

ಅನೈತಿಕ ಸಂಬಂಧ ವಿಚಾರದ ಹಿನ್ನೆಲೆಯಲ್ಲಿ ಈ ಹಿಂದೆ ಸಿದ್ದಪ್ಪ ದಂಪತಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮದ ಮುಖಂಡರು ಮತ್ತು ಕುಟುಂಬಸ್ಥರು ಸೇರಿ ರಾಜಿ ಪಂಚಾಯಿತಿ ಕೂಡ ನಡೆಸಿದ್ದರು. ಆದರೂ ಸುಧಾರಿಸಿಕೊಳ್ಳದ ಈ ಸಮಸ್ಯೆಯಿಂದಾಗಿ ಸಿದ್ದಪ್ಪ ಮಗುವನ್ನು ಕಂಡರೆ ರೇಗುತ್ತಿದ್ದ ಎಂದು ಆತನ ಪತ್ನಿ ಪೊಲೀಸರಿಗೆ ತಿಳಿಸಿದ್ದಾಳೆ. ಪತ್ನಿಯ ಈ ಹೇಳಿಕೆಯನ್ನು ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಆರೋಪಿ ಸಿದ್ದಪ್ಪನ ಈ ದುಷ್ಕ್ರತ್ಯ ಬೆಳಕಿಗೆ ಬಂದಿದೆ.

- Advertisement -

ಸದ್ಯ ಹಾರೂಗೇರಿ ಪೊಲೀಸರು ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Join Whatsapp