ಸ್ನೇಹಿತರ ನಡುವೆ ವೈಮನಸ್ಸು: ಚಾಕುವಿನಿಂದ ಇರಿದು ಕೊಲೆ

Prasthutha|


ಬೆಂಗಳೂರು: ಕೊಲೆ ಮಾಡಲು ಸಂಚು ಮಾಡಿ ಬಂದವನೇ ಭೀಕರವಾಗಿ ಕೊಲೆಯಾದ ಘಟನೆ ಕುಮಾರಸ್ವಾಮಿ ಲೇಔಟ್’ನ ಕೋಣನಕುಂಟೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

- Advertisement -


ಶರತ್ ಕೊಲೆಯಾದ ಯುವಕ. ಕೃತ್ಯ ನಡೆಸಿ ಪರಾರಿಯಾಗಿರುವ ಆರೋಪಿ ಲೋಕೇಶ್ ಎಂಬಾತನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.


ಒಂದು ಕಾಲದ ಆತ್ಮೀಯ ಸ್ನೇಹಿತರಾಗಿದ್ದ ಶರತ್ ಹಾಗೂ ಲೋಕೇಶ್ ಹಣಕಾಸಿನ ವಿಚಾರಕ್ಕೆ ವೈಮನಸ್ಸು ಮೂಡಿ ಬೇರೆ ಬೇರೆಯಾಗಿದ್ದರು. ಆದರೂ ಇಬ್ಬರ ನಡುವೆ ಶೀತಲಸಮರ ನಡೆಯುತ್ತಿತ್ತು.

- Advertisement -

ಈ ಮಧ್ಯೆ ಶುಕ್ರವಾರ ರಾತ್ರಿ 11ರ ವೇಳೆ ಶರತ್ ಕುಮಾರ್ ಹಾಗೂ ಲೋಕೇಶ್ ಕೋಣನಕುಂಟೆಯಲ್ಲಿ ಮುಖಾಮುಖಿಯಾಗಿದ್ದರು. ಮೊದಲಿಗೆ ಇಬ್ಬರ ನಡುವೆ ಸಣ್ಣದಾಗಿ ಶುರುವಾದ ಗಲಾಟೆ ನಂತರ ಅತಿರೇಕಕ್ಕೆ ಹೋಗಿ ಪರಸ್ಪರ ಹೊಡೆದಾಟಕ್ಕೆ ಮುಂದಾದಾಗ ಶರತ್ ಕುಮಾರ್ ಚಾಕು ತೆಗೆದುಕೊಂಡು ಲೋಕೇಶ್ ಹತ್ಯೆಗೆ ಮುಂದಾಗಿದ್ದಾನೆ. ಆದರೆ ಲೋಕೇಶ್ ತಕ್ಷಣ ಶರತ್’ನ ಕೈಯಲ್ಲಿದ್ದ ಚಾಕು ಕಸಿದುಕೊಂಡು ಶರತ್ ಕುಮಾರ್’ಗೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.


ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Join Whatsapp