ಕಸದ ಲಾರಿ ಹರಿದು ವೃದ್ಧ ಮೃತ್ಯು| ಬೆಂಗಳೂರಿನಲ್ಲಿ BBMP ಕಸದ ಲಾರಿಗೆ ಎರಡನೇ ಬಲಿ

Prasthutha|

ಬೆಂಗಳೂರು: ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಶಾಲಾ ಬಾಲಕಿಯನ್ನು ಬಲಿ ಪಡೆದಿದ್ದ BBMP ಕಸದ ಲಾರಿ, ಇಂದು ಮತ್ತೊಂದು ಜೀವ ಬಲಿ ಪಡೆದಿದೆ. ಇಂದು ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೃದ್ಧರೊಬ್ಬರ ಮೇಲೆ ಕಸದ ಲಾರಿ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ರಾಮಯ್ಯ(60) ಎಂದು ಗುರುತಿಸಲಾಗಿದೆ.

- Advertisement -

ದ್ವಿಚಕ್ರ ವಾಹನದಲ್ಲಿ ರಾಮಯ್ಯ ತೆರಳುತ್ತಿದ್ದ ವೇಳೆ, ಬಾಗಲೂರು ಕ್ರಾಸ್ ಬಳಿ ರೇವ ಯೂನಿರ್ವಸಿಟಿ ಮುಂಭಾಗ ಕಸದ ಲಾರಿ ಡಿಕ್ಕಿ ಹೊಡೆದಿದೆ. ಕೆಳಕ್ಕೆ ಬಿದ್ದ ರಾಮಯ್ಯ ಅವರ ಮೇಲೆ ಲಾರಿಯ ಚಕ್ರ ಹರಿದಿದೆ. ಅಪಘಾತದ ಭೀಕರತೆಗೆ ದೇಹ ಛಿದ್ರಗೊಂಡಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಮಾ.21ರಂದು ಶಾಲೆಯಿಂದ ವಾಪಸಾಗುತ್ತಿದ್ದ 12ರ ಬಾಲಕಿಯ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಇದೀಗ ಮತ್ತೊಂದು ದುರಂತ ಸಂಭವಿಸಿದ್ದು ಕಸದ ಲಾರಿ ಚಾಲಕರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

Join Whatsapp