ಇ-ಸ್ಕೂಟರ್‌ ಗಳ ಸ್ಫೋಟ ಪ್ರಕರಣ: ತಜ್ಞರ ಸಮಿತಿ ರಚನೆ

Prasthutha|

ಹೊಸದಿಲ್ಲಿ: ಇತ್ತೀಚೆಗೆ ಎರಡು ವಿದ್ಯುತ್‌ ಚಾಲಿತ ಸ್ಕೂಟರ್‌ ಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಈ ಪ್ರಕರಣಗಳಿಗೆ ಕಾರಣವೇನೆಂದು ತನಿಖೆ ಮಾಡಲು ಕೇಂದ್ರ ಸರಕಾರ ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿದೆ.

- Advertisement -

ಕಳೆದ ವಾರ ಓಲಾ ಎಸ್‌1 ಪ್ರೊ ಎಲೆಕ್ಟ್ರಿಕ್‌ ಸ್ಕೂಟರ್‌ ಗೆ ಪುಣೆಯಲ್ಲಿ ಬೆಂಕಿ ಹತ್ತಿಕೊಂಡಿತ್ತು. ಆದರೆ ಪ್ರಾಣಹಾನಿಯಾಗಿರಲಿಲ್ಲ. ಇದಾದ ಬಳಿಕ ವೆಲ್ಲೂರಿನಲ್ಲಿ ಒಕಿನಾವ ಕಂಪೆನಿಯ ಸ್ಕೂಟರ್‌ ಗೂ ಬೆಂಕಿ ಹತ್ತಿಕೊಂಡಿತ್ತು. ಅದರಿಂದಾಗಿ ತಂದೆ-ಮಗಳು ತೀರಿಕೊಂಡಿದ್ದರು. ಈ ಎರಡೂ ಪ್ರಕರಣಗಳನ್ನು ತನಿಖೆ ನಡೆಸಲು ಸರ್ಕಾರ ಸಮಿತಿಯೊಂದನ್ನು ರಚಿಸಿದೆ.

Join Whatsapp