‘ಕೇರಳಿಗರು ಸುಶಿಕ್ಷಿತರು , ಹಾಗಾಗಿ ಅಲ್ಲಿ ಬಿಜೆಪಿ ಬೆಳೆದಿಲ್ಲ’ : ರಾಜ್ಯದ ಏಕೈಕ ಬಿಜೆಪಿ ಶಾಸಕ !

Prasthutha|

ಕೇರಳದಲ್ಲಿ 90 ಶೇಕಡಾ ಸಾಕ್ಷರತೆಯಿದೆ. ಹಾಗಾಗಿ ಕೇರಳದಲ್ಲಿ ಬಿಜೆಪಿ ಪಕ್ಷ ಇನ್ನೂ ಬೆಳೆದಿಲ್ಲ ಎಂದು ರಾಜ್ಯದ ಏಕೈಕ ಬಿಜೆಪಿ ಶಾಸಕ ಓ ರಾಜಗೋಪಾಲ್ ಹೇಳಿದ್ದಾರೆ. ಆ ಮೂಲಕ ಉನ್ನತ ಶಿಕ್ಷಣ ಪಡೆದ ಸುಶಿಕ್ಷಿತರು ಯಾರೂ ಬಿಜೆಪಿಯನ್ನು ಬೆಂಬಲಿಸಲ್ಲ ಎಂದು ಅವರು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ.

- Advertisement -

“ಕೇರಳ ಇತರೆ ರಾಜ್ಯಗಳಂತಲ್ಲ. ಅದೊಂದು ವಿಭಿನ್ನತೆಯಿಂದ ಕೂಡಿದ ರಾಜ್ಯವಾಗಿದೆ. ಇಲ್ಲಿ ಜನರು 90 ಶೇಕಡಾ ಸಾಕ್ಷರತೆಯಿಂದ ಕೂಡಿದ್ದಾರೆ. ಅವರು ಯೋಚಿಸುತ್ತಾರೆ ಮತ್ತು ಸಂವಹನ ನಡೆಸುತ್ತಾರೆ. ನಮಗೆ ಇದೊಂದು ಸಮಸ್ಯೆಯಾಗಿದೆ” ಎಂದು ಅವರು ಹೇಳಿದ್ದಾರೆ.

Join Whatsapp