ಗೋಹತ್ಯೆ ನಿಷೇಧ ಕಾನೂನಿನಿಂದ ಸಂವಿಧಾನಕ್ಕೆ ಅಪಚಾರ, ಪೌಷ್ಟಿಕ ಆಹಾರಕ್ಕೆ ಸಂಚಕಾರ: ಡಾ.ಸಿಲ್ವಿಯಾ

Prasthutha|

ಬೆಂಗಳೂರು: ಆಹಾರ ನಮ್ಮ ಹಕ್ಕು ಕರ್ನಾಟಕ ಅಭಿಯಾನದಡಿ ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಸಾರ್ವಜನಿಕ ಆರೋಗ್ಯ ತಜ್ಞೆ ಡಾ. ಸಿಲ್ವಿಯಾ ಕರ್ಪಗಂ ಅವರು, ಜಾನುವಾರು ಮಾಂಸ ಸಮರ್ಪಕವಾಗಿ ದೊರೆಯದಿರುವುದು ಬಡವರ ಆಹಾರ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಆರೋಪಿಸಿದ್ದಾರೆ.

- Advertisement -


ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ರಾಜ್ಯದಲ್ಲಿ ಪೌಷ್ಟಿಕ ಆಹಾರದ ಕೊರತೆ ಉಂಟಾಗಿದೆ. ಕರ್ನಾಟಕದಲ್ಲಿ 2020ರಲ್ಲಿ ಜಾರಿಗೆ ತಂದ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯು ಸಂವಿಧಾನದ 29(1) ವಿಧಿ ಕೊಡಮಾಡಿದ ಹಕ್ಕನ್ನು ಕಸಿದುಕೊಂಡಿದೆ. ಆಹಾರದ ಹಕ್ಕಿನ ರಕ್ಷಣೆ ಅಗತ್ಯ. ಮುಖ್ಯಮಂತ್ರಿ ಬೊಮ್ಮಾಯಿಯವರು ಈ ಕಾಯ್ದೆಯನ್ನು ಹಿಂದೆಗೆದುಕೊಳ್ಳಲಿ ಎಂದರು.


ಮೋಹನ್ ರಾಜ್ ಮಾತನಾಡಿ, ಬಿಜೆಪಿ ಈ ನಕಲಿ ದನ ಭಕ್ತಿ ಬಿಟ್ಟು ಗೋವಾ, ಈಶಾನ್ಯ ರಾಜ್ಯಗಳು ಮತ್ತು ಕೇರಳದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಿ. ಇಡೀ ದೇಶಕ್ಕೆ ಅಗತ್ಯವಿದ್ದರೆ ಕಾನೂನು ತರಲಿ. ಜನರ ಆಹಾರದ ತಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡದಿರಲಿ ಎಂದರು.

Join Whatsapp