ST ಹೆಣ್ಣು ಮಗಳನ್ನು ಮುಂದಿಟ್ಟುಕೊಂಡು ನಿಮ್ಮ ರಾಜಕೀಯ ಮಾಡಬೇಡಿ : ಸಂತ್ರಸ್ತೆ ಯುವತಿಯ ಪೋಷಕರ ಮನವಿ

Prasthutha|

► ‘ಡಿಕೆಶಿ ನಮ್ಮಕ್ಕನಿಗೆ ಹಣ ನೀಡಿ ಗೋವಾಕ್ಕೆ ಕಳುಹಿಸಿದ್ದಾರೆ’ :  ಯುವತಿಯ ಸಹೋದರ

- Advertisement -

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧ ಪ್ರಕರಣ ದಾಖಲಾಗಿರುವ ಕಾರಣಕ್ಕೆ ಬೆಂಗಳೂರಿನ ಆಡುಗೋಡಿಯಲ್ಲಿರುವ SIT ಟೆಕ್ನಿಕಲ್ ವಿಂಗ್ ನಲ್ಲಿ SIT ವಿಚಾರಣೆ ಬಳಿಕ ಸಂತ್ರಸ್ತೆ ಯುವತಿಯ ಪೋಷಕರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಒಂದು ಹೆಣ್ಣುಮಗಳನ್ನು ಮುಂದಿಟ್ಟು ನಿಮ್ಮ ರಾಜಕಾರಣ ಮಾಡಬೇಡಿ ಎಂದು ಕೈ ಮುಗಿದು ವಿನಂತಿಸಿಕೊಂಡಿದ್ದಾರೆ. ನಮ್ಮ ಬಳಿಯಿದ್ದ ಸಾಕ್ಷ್ಯಗಳನ್ನು ಅಧಿಕಾರಿಗಳಿಗೆ ಕೊಟ್ಟಿದ್ದೇವೆ.‌ ಒಬ್ಬ ಹೆಣ್ಣು ಮಗಳನ್ನು ಮುಂದೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಮಗಳನ್ನ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ.

ಸಂತ್ರಸ್ತ ಯುವತಿ ಮಾತನಾಡುತ್ತಾ ನಾನೊಬ್ಬ ನಿವೃತ್ತ ಯೋಧ. ಒಬ್ಬ ST ಹೆಣ್ಣುಮಗಳಿಗೆ ಅನ್ಯಾಯವಾಗುತ್ತಿದೆ. ನಮ್ಮ ಮಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. SIT ನಮಗೆ ಸಂಪೂರ್ಣ ಸಾಥ್ ನೀಡಿದೆ. ಮಾಧ್ಯಮಗಳೊಂದಿಗೂ ಕೇಳಿಕೊಳ್ಳುವುದು ಇಷ್ಟೇ ಅತ್ಯಂತ ಕೆಟ್ಟದಾಗಿ ನೀವು ವರದಿಯನ್ನು ಬಿತ್ತರಿಸುತ್ತಿದ್ದೀರಿ. ದಯವಿಟ್ಟು ಅದನ್ನು ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ‌.

- Advertisement -

ಸಂತ್ರಸ್ತ ಯುವತಿಯ ಸಹೋದರ ಮಾತನಾಡುತ್ತಾ, ನಮ್ಮ ಅಕ್ಕನಿಗೆ ಡಿ.ಕೆ. ಶಿವಕುಮಾರ್ ಅವರೇ ಹಣ ಕೊಟ್ಟು ಗೋವಾಕ್ಕೆ ಕಳುಹಿಸಿದ್ದಾರೆ. ‌ಹೊಲಸು ರಾಜಕಾರಣಕ್ಕೆ ನಮ್ಮ ಮಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ದಯವಿಟ್ಟು ನಮ್ಮ ಅಕ್ಕನನ್ನು ನಮಗೆ ಹಿಂತಿರುಗಿಸಿ ಅಷ್ಟೇ ಸಾಕು ಎಂದು ಹೇಳಿಕೆ ನೀಡಿದ್ದಾರೆ.

Join Whatsapp