ಇನ್ನೂ ಮೂವರು ಸಚಿವರ ಸಿಡಿ ನನ್ನ ಬಳಿ ಇದೆ : ಮತ್ತೊಂದು ಬಾಂಬ್‌ ಸಿಡಿಸಿದ ದಿನೇಶ್​ ಕಲ್ಲಹಳ್ಳಿ

Prasthutha|

ಬೆಂಗಳೂರು: ಇನ್ನೂ ಮೂವರು ಹಾಲಿ ಸಚಿವರ ಸಿಡಿ ನನ್ನ ಬಳಿ ಇದೆ ಎಂದು ದಿನೇಶ್​ ಕಲ್ಲಹಳ್ಳಿ ಹೇಳಿದ್ದಾರೆ.

- Advertisement -

ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು “ನನ್ನ ಬಳಿ ಇರುವ ವೀಡಿಯೋಗಳನ್ನು ಬಿಡುಗಡೆ ಮಾಡುವುದಕ್ಕೆ ಸಂಬಂಧಪಟ್ಟಂತೆ ನಾನು ಕಾನೂನ ತಜ್ಞರ ಸಲಹೆಯನ್ನು ಪಡೆದುಕೊಂಡು ಮುಂದುವರೆಯುತ್ತೇನೆ” ಎಂದು ಹೇಳಿದ್ದಾರೆ.

ಇನ್ನೂ ತಮ್ಮ ಬಳಿ ಇರುವ ಮೂವರ ವೀಡಿಯೋಗೆ ಸಂಬಂಧಪಟ್ಟಂತೆ ನಾನು ಈ ಬಗ್ಗೆ ಶೀಘ್ರದಲ್ಲೇ ಮಾಹಿತಿಯನ್ನು ನೀಡಲಿದ್ದೇನೆ, ತಾನು ರಮೇಶ್ ಜಾರಕಿಹೊಳಿಯವರ ವೀಡಿಯೋ ಬಿಡುಗಡೆ ಮಾಡಿದ ಬಳಿಕ ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ಹೇಳಿರುವ ಅವರು,  ಈ ಬಗ್ಗೆ ತನಗೆ ಭದ್ರತೆಯನ್ನು ಒದಗಿಸುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

Join Whatsapp