ಸಂಘಪರಿವಾರದ ಹಲಾಲ್ ನಿಷೇಧ ಅಭಿಯಾನಕ್ಕೆ ಸಡ್ಡು: ದೇವನೂರು ಮಹದೇವ ನೇತೃತ್ವದಲ್ಲಿ ಹಲಾಲ್ ಮಾಂಸ ಖರೀದಿ

Prasthutha|

ಮೈಸೂರು: ಸಂಘಪರಿವಾರದ ಹಲಾಲ್ ನಿಷೇಧ ಅಭಿಯಾನಕ್ಕೆ ಸಡ್ಡು ಹೊಡೆದಿರುವ ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ ಮತ್ತು ಸಕಲೆಂಟು ಜಾತಿ ಸಹಬಾಳ್ವೆ ಸಂಘ, ನಗರದ ಮಹದೇವಪುರ ರಿಂಗ್ ರಸ್ತೆಯಲ್ಲಿರುವ ಮುಸ್ಲಿಮರ ಅಂಗಡಿಯಲ್ಲಿ ಹಲಾಲ್ ಮಾಂಸ ಖರೀದಿಸಿದ್ದಾರೆ.

- Advertisement -

ಸಾಹಿತಿ ದೇವನೂರು ಮಹದೇವ ನೇತೃತ್ವದಲ್ಲಿ ಹೋರಾಟಗಾರರಾದ ಪ.ಮಲ್ಲೇಶ್, ನಾಗೇಂದ್ರ, ಗುರುಪ್ರಸಾದ್, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಪಿ.ಮರಂಕಯ್ಯ, ಬಸವರಾಜು, ಕಲ್ಲಹಳ್ಳಿ ಕುಮಾರ ಇನ್ನಿತರರು ಸೈಯ್ಯದ್ ರಿಜ್ವಾನ್ ಒಡೆತನದ ಕರ್ನಾಟಕ ಮಟನ್ ಅಂಡ್ ಚಿಕನ್ ಸ್ಟಾಲ್‌ನಲ್ಲಿ ಮಾಂಸ ಖರೀದಿಸಿ ಸಂಘಪರಿವಾರದ ಅಭಿಯಾನಕ್ಕೆ ವಿರೋಧ ವ್ಯಕ್ತಪಡಿಸಿದರು.

Join Whatsapp