ಪ್ರಧಾನಿ ಹೇಳಿಕೆ ವಿರೋಧಿಸಿ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದ ಉಸ್ಮಾನ್ ಘನಿ ಬಂಧನ

Prasthutha|

ಜೈಪುರ್: ಇತ್ತೀಚೆಗೆ ರಾಜಸ್ಥಾನದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಬಿಕಾನೇರ್‌ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಸ್ಮಾನ್‌ ಘನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಶಾಂತಿ ಭಂಗ ಪ್ರಕರಣವೊಂದರಲ್ಲಿ ರಾಜಸ್ಥಾನ ಪೊಲೀಸರು ಇಂದು ಘನಿಯನ್ನು ಬಂಧಿಸಿದ್ದಾರೆ.

ಓರ್ವ ಮುಸ್ಲಿಮನಾಗಿ ತನಗೆ ಪ್ರಧಾನಿಯ ಹೇಳಿಕೆ ನಿರಾಸೆ ಮೂಡಿಸಿದೆ, ಬಿಜೆಪಿಗೆ ಮತ ನೀಡಿ ಎಂದು ಮುಸ್ಲಿಮರ ಬಳಿ ಮತ ಯಾಚನೆಗೆ ಹೋದಾಗ ಸಮುದಾಯದ ಜನರು ಪ್ರಧಾನಿಯ ಹೇಳಿಕೆಗಳನ್ನು ನೆನಪಿಸುತ್ತಾರೆ. ತನ್ನಿಂದ ಉತ್ತರಗಳನ್ನು ಬಯಸುತ್ತಾರೆ ಎಂದು ಉಸ್ಮಾನ್ ಘನಿ ಹೇಳಿದ್ದರು. ಪ್ರಸ್ತುತ ಬಂಧನದ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.

Join Whatsapp