ಸಿಎಂ ವಿರುದ್ಧ ಕೊಲೆ ಬೆದರಿಕೆ; ಆರ್ ಎಸ್ ಎಸ್ ಕಾರ್ಯಕರ್ತನ ಬಂಧನ

Prasthutha|

ತಿರುವನಂತಪುರಂ: ಸಾಮಾಜಿಕ ಜಾಲತಾಣಗಳ ಮೂಲಕ ಮುಖ್ಯಮಂತ್ರಿಗೆ ಕೊಲೆ ಬೆದರಿಕೆ ಹಾಕಿ , ಅಸಭ್ಯಮಾತುಗಳನ್ನಾಡಿದ್ದ ಆರ್ ಎಸ್ ಎಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ ಘಟನೆ  ಪಾಲಕ್ಕಾಡ್ ನ ಕಸಬಾ ಎಂಬಲ್ಲಿ ನಡೆದಿದೆ.

- Advertisement -

ಎಲಪ್ಪುಳ್ಳಿ ತೇನಾರಿ ಮಣಿಯಾಂಚೇರಿ ನಿವಾಸಿ ಜಯಪ್ರಕಾಶ್ (40) ಬಂಧಿತ ಆರೋಪಿ. ಕಳೆದ ಡಿಸೆಂಬರ್ 21 ರಂದು ಈತ ಸಿಎಂ ವಿರುದ್ಧ ಕೊಲೆ ಬೆದರಿಕೆ ಮತ್ತು ಅವಾಚ್ಯವಾಗಿ ಬೈದು ಪೋಸ್ಟ್ ಹಾಕಿದ್ದ. ಲಾರಿ ಚಾಲಕನಾಗಿರುವ ಈತ ಪೊಲೀಸರು ಪ್ರಕರಣ ದಾಖಲಿಸಿದ್ದನ್ನು ತಿಳಿದ ಕೂಡಲೇ ತಲೆಮರೆಸಿಕೊಂಡಿದ್ದ.

ಕರ್ನಾಟಕ, ಮಹಾರಾಷ್ಟ್ರ ಮುಂತಾದ ಕಡೆಗಳಲ್ಲಿ ಅಡಗಿಕೊಂಡಿದ್ದಾಗಲೂ ದೂರವಾಣಿ ಮೂಲಕ ಎಲಪ್ಪುಳ್ಳಿ ಯ ಸಿಪಿಎಂ ಕಾರ್ಯಕರ್ತರನ್ನು ಬೈದು ಕೊಲೆ ಬೆದರಿಕೆ ಒಡ್ಡತ್ತಿದ್ದ ಎನ್ನಲಾಗಿದೆ. ಹಿಂದಿನ ದಿನ ಮನೆಗೆ  ಬಂದಿದ್ದ ಆರೋಪಿಯನ್ನು ಆತನ ಮನೆಯಿಂದಲೇ ಬಂಧಿಸಲಾಗಿದೆ.

Join Whatsapp