ಕೂಚ್ ಬೆಹಾರ್‌ನಲ್ಲಿ ನಾಲ್ವರಲ್ಲ, ಹೆಚ್ಚು ಮಂದಿ ಸಾಯಬೇಕಿತ್ತು : ಪಶ್ಚಿಮ ಬಂಗಾಳ ಬಿಜೆಪಿ ಅಭ್ಯರ್ಥಿ ರಾಹುಲ್‌ ಸಿನ್ಹಾ ವಿವಾದಾತ್ಮಕ ಹೇಳಿಕೆ

Prasthutha|

ಕೋಲ್ಕತ್ತಾ : ಕೂಚ್‌ ಬೆಹಾರ್‌ನಲ್ಲಿ ನಾಲ್ವರಿಗೆ ಅಷ್ಟೇ ಅಲ್ಲದೆ 8 ಮಂದಿಗೆ ಗುಂಡು ಹೊಡೆದು ಉರುಳಿಸಬೇಕಿತ್ತು ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಭ್ಯರ್ಥಿ ರಾಹುಲ್‌ ಸಿನ್ಹಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -


ರಾರ‍ಯಲಿಯೊಂದರಲ್ಲಿ ಮಾತನಾಡಿದ ರಾಹುಲ್‌ ಸಿನ್ಹಾ, ‘ಮಮತಾ ಬ್ಯಾನರ್ಜಿ ಅವರು ಜನರು ಮತದಾನ ಮಾಡದಂತೆ ಅಡ್ಡಿಪಡಿಸುತ್ತಿರುವ ಗೂಂಡಾಗಳ ನಾಯಕಿ. ಕೂಚ್‌ ಬೆಹಾರ್‌ನ ಶೀತಲ್‌ಕುಚಿಯಲ್ಲಿ ಹಿಂಸಾಚಾರ ನಡೆಸಿದವರಿಗೆ ಸಿಆರ್‌ಪಿಎಫ್‌ ಸರಿಯಾದ ಉತ್ತರವನ್ನೇ ನೀಡಿದೆ. ಅಲ್ಲಿ ನಾಲ್ವರ ಬದಲಿಗೆ 8 ಮಂದಿಗೆ ಗುಂಡು ಹೊಡೆಯಬೇಕಿತ್ತು. ಮುಂದಿನ ದಿನಗಳಲ್ಲೂ ಸಿಆರ್‌ಪಿಎಫ್‌ ಇಂಥ ಕಠಿಣ ಉತ್ತರವನ್ನೇ ನೀಡಲಿದೆ’ ಎಂದು ಕೂಚ್‌ಬಿಹಾರ್ ಜಿಲ್ಲೆಯ ಸೀತಾಲ್‌ಕುಚಿಯಲ್ಲಿ ನಡೆದ ಗಲಭೆ ಕುರಿತು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ತುಂಟ ಹುಡುಗರು ಮತ್ತೆ ಹಿಂಸಾಚಾರ ಮಾಡಿದರೆ ಮತ್ತಷ್ಟು ಕೂಚ್‌ ಬೆಹಾರ್‌ನಂತಹಾ ಹತ್ಯೆಗಳು ಪುನರಾವರ್ತನೆಯಾಗಲಿದೆ” ಎಂದು ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲಿಪ್‌ ಘೋಷ್‌ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

Join Whatsapp