ಈಶ್ವರಪ್ಪನ ಫೋಟೊ ಹೊಂದಿರುವ ಕರೆನ್ಸಿ ನೋಟ್ ಸಿದ್ಧ ಪಡಿಸಿದ ಕಾಂಗ್ರೆಸ್

Prasthutha|

ಬೆಂಗಳೂರು: ಶಾಸಕ ಸಂಗಮೇಶ್ ಅವರಿಗೆ ನೀಡಿದ್ದು ₹500 ಕೋಟಿ ಆಫರ್ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಈಶ್ವರಪ್ಪ ಅವರ ಫೋಟೊ ಹೊಂದಿರುವ ಕರೆನ್ಸಿ ನೋಟ್ ವೊಂದನ್ನು ಸಿದ್ಧಪಡಿಸಿ ‘ಆಪರೇಷನ್ ಕಮಲ’ ಎಂದು ವ್ಯಂಗ್ಯ ಮಾಡಿದೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ , ಸಿಎಂ ಹುದ್ದೆಗೆ ₹2,500 ಕೋಟಿ ಪಾವತಿಸುವಾಗ ಆಪರೇಷನ್ ಕಮಲಕ್ಕೆ ₹500 ಕೋಟಿ ಹೆಚ್ಚಲ್ಲ ಅಲ್ಲವೇ? ಈಶ್ವರಪ್ಪ ಅವರೇ, ನೋಟ್ ಎಣಿಸುವ ಮೆಷಿನ್ ಇಟ್ಟಿದ್ದು ಆಪರೇಷನ್ ಕಮಲದ ₹500 ಕೋಟಿ ಎಣಿಸುವುದಕ್ಕಾ, 40 ಪರ್ಸೆಂಟ್ ಕಮಿಷನ್ ಲೂಟಿಯ ಹಣ ಎಣಿಸುವುದಕ್ಕಾ? ₹500 ಕೋಟಿ ಹೂಡಿಕೆ ಹಿಂದೆಗೆಯಲೆಂದೇ ಸಂತೋಷ್ ಪಾಟೀಲ್ ಜೀವ ತೆಗೆದಿರಾ?ಎಂದು ಸರಣಿ ಪ್ರಶ್ನೆ ಮಾಡಿದೆ.

ಆಪರೇಷನ್ ಕಮಲದ ವೇಳೆ ಸಂಗಮೇಶ್ ಅವರಿಗೆ ಬಿಜೆಪಿ ₹50 ಕೋಟಿ ನೀಡುವ ಆಮಿಷ ಒಡ್ಡಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಆರೋಪಿಸಿದ್ದರು.  ಇದಕ್ಕೆ ಪ್ರತಿಕ್ರಿಯಿಸಿದ್ದ ಕೆ.ಎಸ್ ಈಶ್ವರಪ್ಪ, ಡಿ.ಕೆ.ಶಿವಕುಮಾರ್ ಗೆ ಶಾಸಕರ ಬೆಲೆ ಗೊತ್ತಿಲ್ಲ. ನಾನು ಸಂಗಮೇಶ್ ಗೆ ಕೊಟ್ಟಿದ್ದು ₹500 ಕೋಟಿ ಆಫರ್ ಎಂದಿದ್ದರು.

Join Whatsapp