ಜನತೆಗೆ ಉತ್ತಮ ಬದುಕಿನ ಭರವಸೆ ನೀಡಲಾಗದ ಬಿಜೆಪಿ ಉಚಿತ ಶವ ಸಂಸ್ಕಾರದ ಭರವಸೆ ನೀಡುತ್ತಿದೆ: ಕಾಂಗ್ರೆಸ್

Prasthutha|

ಬೆಂಗಳೂರು: ಜನತೆಗೆ ಉತ್ತಮ ಬದುಕಿನ ಭರವಸೆ ನೀಡಲಾಗದ ಬಿಜೆಪಿ ಉಚಿತ ಶವ ಸಂಸ್ಕಾರದ ಭರವಸೆ ನೀಡುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಅಕ್ಕಿ ಕೇಳಿದವರಿಗೆ ಹೋಗಿ ಸಾಯಿರಿ ಎಂದ ಬಿಜೆಪಿ ಸರ್ಕಾರ ಜನರ ಸಾವನ್ನೇ ಬಯಸುತ್ತಿದೆ. ಐದು ಕೆಜಿ ಅಷ್ಟೇ ತಿನ್ನಿ ಎನ್ನುವ ಮೂಲಕ ಜನರ ಹಸಿವನ್ನು ಅಣಕಿಸುವ ಬಿಜೆಪಿ ಸರ್ಕಾರ ಜನರಿಗೆ ‘ಸಾವಿನಭಾಗ್ಯ’ ಕೊಡಲು ಮುಂದಾಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಕಾಂಗ್ರೆಸ್ ಜನರ ಬದುಕನ್ನು ಹಸನಾಗಿಸಲು ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ನೀಡಿತು. ಬಿಜೆಪಿ ಭರವಸೆಯ ಬದುಕು ನೀಡಲಾಗದೆ ಉಚಿತ ಸಾವಿನ ಭಾಗ್ಯ ನೀಡುತ್ತಿದೆ! ಉದ್ಯೋಗ, ಅಕ್ಕಿ ನೀಡಲಾಗದೆ, ಬೆಲೆ ಏರಿಕೆ ತಡೆಯದೆ, ವೈದ್ಯಕೀಯ ವ್ಯವಸ್ಥೆ ನಿರ್ಮಿಸದೆ, ರಕ್ಷಣೆ ನೀಡದೆ ಜನತೆಗೆ ಸಾವು ಒಂದೇ ದಾರಿ ಎನ್ನುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

Join Whatsapp