ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ | ಇನ್ಸ್ ಪೆಕ್ಟರ್ ವಿರುದ್ಧ ಕ್ರಮಕ್ಕೆ ಒತ್ತಾಯ

Prasthutha|

ಕಾರ್ಕಳ: ಸುಮಾರು ಒಂದು ವರ್ಷದ ಹಿಂದಿನ ಎಡಿಟೆಡ್ ಪೋಸ್ಟ್ ನೆಪದಲ್ಲಿ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ರಾಧಾಕೃಷ್ಣ ಹೀರ್ಗಾನ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಕಾರ್ಕಳ ನಗರ ಪೊಲೀಸ್ ಇನ್ಸ್ ಪೆಕ್ಟರ್ ಮಧು ಎಂಬವರು ದರ್ಪ ತೋರಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

- Advertisement -

ಸುಮಾರು ಒಂದು ವರ್ಷದ ಹಿಂದೆ ರಾಧಾಕೃಷ್ಣ ಹೀರ್ಗಾನ ಎಂಬ ಕಾಂಗ್ರೆಸ್ ಕಾರ್ಯಕರ್ತ ನ ಹೆಸರಿನಲ್ಲಿ ನಕಲಿ ಎಕೌಂಟ್ ಕ್ರಿಯೇಟ್ ಮಾಡಿ ಯೋಧರ ವಿರುದ್ಧ ಪೋಸ್ಟ್ ಮಾಡಲಾಗಿತ್ತು. ಈ ಬಗ್ಗೆ ದೂರು ಕೂಡ ದಾಖಲಾಗಿತ್ತು.
ಈಗಾಗಲೇ ಒಮ್ಮೆ ಹೃದಯಾಘಾತಕ್ಕೆ ತುತ್ತಾಗಿ ಚಿಕಿತ್ಸೆ ಪಡೆದಿದ್ದ ರಾಧಾಕೃಷ್ಣ ಅವರ ಮೇಲೆ ಬೂಟು ಕಾಲಿನಲ್ಲಿ ಒದ್ದು ಮಾರಣಾಂತಿಕ ಹಲ್ಲೆ ಮಾಡಿದ ಆ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಒತ್ತಾಯಿಸಿದ್ದಾರೆ.

Join Whatsapp