ಪ್ರಚೋದನಕಾರಿ ಭಾಷಣ | ಶರಣ್ ಪಂಪ್ ವೆಲ್, ಭುಜಂಗ ಕುಲಾಲ್, ಸ್ವಾಮೀಜಿ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ SDPI ದೂರು

Prasthutha|

ಮೂಡುಬಿದಿರೆ : ತೊಕ್ಕೊಟ್ಟಿನಲ್ಲಿ ಇತ್ತೀಚೆಗೆ ನಡೆದ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆಯಲ್ಲಿ ಕೋಮು ದ್ವೇಷ ಮತ್ತು ಪ್ರಚೋದನಕಾರಿ ಭಾಷಣ ಮಾಡಿದ ಶರಣ್ ಪಂಪ್ ವೆಲ್, ಭುಜಂಗ ಕುಲಾಲ್ ಮತ್ತು ಶೇಖರಾನಂದ ಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೂಡುಬಿದಿರೆ ಠಾಣೆಯಲ್ಲಿ ಎಸ್ ಡಿಪಿಐ ಕಾರ್ಯಕರ್ತರು ದೂರು ನೀಡಿದ್ದಾರೆ.

- Advertisement -

ಮೂಡುಬಿದಿರೆ ಠಾಣಾಧಿಕಾರಿಗಳಿಗೆ ಭಾಷಣದ ವೀಡಿಯೊ, ಸಿಡಿ ಲಗತ್ತಿಸಿದ ದೂರನ್ನು ಎಸ್ ಡಿಪಿಐ ಪುತ್ತಿಗೆ ಗ್ರಾಮ ಸಮಿತಿ ಸದಸ್ಯ ಫಿರೋಝ್ ಖಾನ್ ದೂರು ಸಲ್ಲಿಸಿದರು.

ಈ ವೇಳೆ ಎಸ್ ಡಿಪಿಐ ಮೂಲ್ಕಿ-ಮೂಡುಬಿದಿರೆ ಕ್ಷೇತ್ರ ಸಮಿತಿ ಕಾರ್ಯದರ್ಶಿ ನಿಸಾರ್ ಮರವೂರು, ಎಸ್ ಡಿಪಿಐ ಮೂಡುಬಿದಿರೆ ವಲಯ ಅಧ್ಯಕ್ಷ ಇಬ್ರಾಹೀಂ ಹಂಡೇಲು, ಅಶ್ರಫ್ ಕೋಟೆ ಬಾಗಿಲು, ಅನ್ಸಾಫ್, ಶೆಹರಾಝ್ ಉಪಸ್ಥಿತರಿದ್ದರು.

Join Whatsapp