ಶಿಕ್ಷಕಿಯರ ನಡುವೆ ಜಗಳ: ಗ್ರಾಮಸ್ಥರಿಂದ ಶಾಲೆಗೆ ಬೀಗ

Prasthutha|

ತುಮಕೂರು: ಶಿಕ್ಷಕಿಯರ ನಡುವಿನ ಮನಸ್ತಾಪದಿಂದ ನಿರಂತರ ನಡೆಯುತ್ತಿದ್ದ ಜಗಳಕ್ಕೆ ರೋಸಿ ಹೋದ ಗ್ರಾಮಸ್ಥರು ಶಾಲೆಗೇ ಬೀಗ ಜಡಿದಿದ್ದಾರೆ.

- Advertisement -

ತುಮಕೂರು ತಾಲೂಕಿನ ಚಿಕ್ಕಸಾರಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯರಾದ ಗಂಗಲಕ್ಷ್ಮಮ್ಮ ಹಾಗೂ ಭಾಗ್ಯಮ್ಮ ನಡುವೆ ಪರಸ್ಪರ ವೈಷಮ್ಯ ಇದೆ. ಹೀಗಾಗಿ ಪ್ರತಿದಿನವೂ ಇವರು ಶಾಲೆಗೆ ತಡವಾಗಿ ಬರುತ್ತಿದ್ದು, ತರಗತಿ ವೇಳೆಯಲ್ಲಿ ದಿನಂಪ್ರತಿ ಕಿತ್ತಾಡುತ್ತಿದ್ದರು.

ಮಕ್ಕಳಿಗೆ ಪಾಠ ಮಾಡದೇ ಸದಾ ಪರಸ್ಪರ ಜಗಳವಾಡುತ್ತಿದ್ದ ಶಿಕ್ಷಕಿಯರ ವರ್ತನೆ ಬಗ್ಗೆ ವಿದ್ಯಾರ್ಥಿಗಳು ಪೋಷಕರಲ್ಲಿ ಅಲವತ್ತುಕೊಂಡಿದ್ದಾರೆ.. ಶಿಕ್ಷಕಿಯರ ಈ ವರ್ತನೆ ಕಂಡು ರೋಸಿ ಹೋದ ಗ್ರಾಮಸ್ಥರು, ಪಾಠ ಮಾಡದೇ ಜಗಳವಾಡುತ್ತಾರೆಂದು ಶಾಲೆಗೆ ಬೀಗ ಜಡಿದು ಮಕ್ಕಳನ್ನು ಸೇರಿಸಿ ಪ್ರತಿಭಟಿಸಿದ್ದಾರೆ.

Join Whatsapp